ಮೋದಿ ಆಡಳಿತದಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ಸಚಿವಾಲಯದ ಇಲಾಖೆಯಾಗಿ ಮಾರ್ಪಟ್ಟಿದೆ: ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಿಸರ್ವ್ ಬ್ಯಾಂಕ್ ಅನ್ನು 'ಅಸ್ಥಿರಗೊಳಿಸುತ್ತಿದೆ' ದರ ಸ್ವಾಯತ್ತತೆ ಮೇಲೆ ಆಕ್ರಮಣ ನಡೆಸಿ ವ್ಯವಸ್ಥೆಯನ್ನು 'ಸಡಿಲಗೊಳಿಸಿದೆ'.ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ. 
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
Updated on

ಹುಬ್ಬಳ್ಳಿ:  ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಿಸರ್ವ್ ಬ್ಯಾಂಕ್ ಅನ್ನು 'ಅಸ್ಥಿರಗೊಳಿಸುತ್ತಿದೆ' ದರ ಸ್ವಾಯತ್ತತೆ ಮೇಲೆ ಆಕ್ರಮಣ ನಡೆಸಿ ವ್ಯವಸ್ಥೆಯನ್ನು 'ಸಡಿಲಗೊಳಿಸಿದೆ'.ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.

ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾತ್ಯಾತೀತ ಜನತಾದಳ ಮುಖ್ಯಸ್ಥ ದೇವೇಗೌಡ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ವಾಜಪೇಯಿ ಆರು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿದ್ದರು, ಹತ್ತು ವರ್ಷಗಳ ಕಾಲ ಮನಮೋಹನ್ ಸಿಂಗ್ ಪ್ರಧಾನಿ, ಇನ್ನು ನರೇಂದ್ರ ಮೋದಿ ಪ್ರಧಾನಿಯಾಗಿ ಇದು ಆರನೇ ವರ್ಷ ಅವರ (ಮೋದಿಯವರ) ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ಸಚಿವಾಲಯದ ಇಲಾಖೆಯಂತೆ ಮಾರ್ಪಟ್ಟಿದೆ. " ದೇವೇಗೌಡ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೋದಿ ನಾಯಕತ್ವದಲ್ಲಿ ಆರ್‌ಬಿಐ ಅನ್ನು ಅಸ್ಥಿರಗೊಳಿಸಲಾಯಿತು, ಅದರ ಸ್ವಾಯತ್ತತೆಯ ಮೇಲೆ ದಾಳಿ ಮಾಡಲಾಗಿದೆ.ಹಣಕಾಸು ಸಲಹೆಗಾರರ ​​ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ಸಲಹೆಯನ್ನು ಕಾರ್ಯಗತಗೊಳಿಸದೆ ನಿರ್ಲಕ್ಷಿಸಲಾಗಿದೆ. ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ನಿಯಂತ್ರಣ ಸ<ಸ್ಥೆಯಾಗಿದೆ. ಅಂತಹಾ ಸಂಸ್ಥೆಯ ವ್ಯವಸ್ಥೆಯನ್ನು ಸಡಿಲಗೊಳಿಸಲಾಗಿದೆ" ಎಂದು ಅವರು ಹೇಳಿದರು.

ನಗದು ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕಿನ ಆಡಳಿತ ಮಂಡಳಿಯನ್ನು ಪುನರಚಿಸಿರುವ ಆರ್‌ಬಿಐ ಖಾತೆದಾರರು ಬ್ಯಾಂಕಿನಲ್ಲಿ ಠೇವಣಿ ಹಿಂಪಡೆಯುವಿಕೆಯನ್ನು ಒಂದು ಖಾತೆಗೆ ಒಂದು ತಿಂಗಳಿಗೆ 50,000 ರೂ.ಗೆ ಮಿತಿಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com