ಬೂತ್ ಮಟ್ಟದಲ್ಲಿ ಗೆದ್ದರೆ ಕ್ಷೇತ್ರ ಗೆಲ್ಲಬಹುದು: ಶಿರಾದಲ್ಲಿ ವರ್ಕೌಟ್ ಆಯ್ತು ಅಮಿತ್ ಶಾ ಕಾನ್ಸೆಪ್ಟ್!

ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ. ಶಿರಾದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ರಾಜೇಶ್ ಗೌಡ ಕಾಂಗ್ರೆಸ್ ಹಿರಿಯ ನಾಯಕ ಜಯಚಂದ್ರ ಅವರನ್ನು ಸೋಲಿಸಿದ್ದಾರೆ.
ಶಿರಾ ಚುನಾವಣಾ ಪ್ರಚಾರ
ಶಿರಾ ಚುನಾವಣಾ ಪ್ರಚಾರ
Updated on

ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ. ಶಿರಾದಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ರಾಜೇಶ್ ಗೌಡ ಕಾಂಗ್ರೆಸ್ ಹಿರಿಯ ನಾಯಕ ಜಯಚಂದ್ರ ಅವರನ್ನು ಸೋಲಿಸಿದ್ದಾರೆ. ಬಿವೈ ವಿಜಯೇಂದ್ರ, ಎಂಎಲ್ ಸಿ ರವಿಕುಮಾರ್ ಅವರಿಗೆ ಪಕ್ಷ ಧನ್ಯವಾದ ಹೇಳಿದೆ. 

ಕಳೆದ 2 ತಿಂಗಳಿಂದ ಎಂಎಲ್ ಸಿ ರವಿಕುಮಾರ್ ಶಿರಾದಲ್ಲಿ ಬೀಡುಬಿಟ್ಟಿದ್ದರು. ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರ  ಬೂತ್ ಗೆದ್ದರೇ ಕ್ಷೇತ್ರ ಗೆಲ್ಲುತ್ತೇವೆ ಎಂಬ ಪರಿಕಲ್ಪನೆಯನ್ನು ಶಿರಾ ಉಪ ಚುನಾವಣೆಯಲ್ಲಿ ಬಳಕೆ ಮಾಡಲಾಯಿತು. 

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಶೇ.,8ರಿಂದ 9 ರಷ್ಚು ಮಾತ್ರ ಮತ ಪಡೆದಿತ್ತು. ಈ ಬಾರಿ ರಾಜೇಶ್ ಗೌಡ 13,414 ಮತಗಳಿಂದ ಜಯ ಗಳಿಸಿದ್ದಾರೆ. ಶಿರಾದ 264 ಬೂತ್ ಗಳಿಗೂ ಭೇಟಿ ನೀಡಿದ್ದೆ, ಸ್ಥಳೀ ನಾಯಕರ ಜೊತೆ ಚರ್ಚಿಸಿ ಅವರ ನಂಬಿಕೆ ಗಳಿಸಿದ್ದೆ, ಬೂತ್ ಮಟ್ಟದ ಸಮಿತಿ ರಚಿಸಿ, ವಾಟ್ಸಾಪ್ ಗ್ರೂಪ್ ರಚಿಸಿದ್ದೆವು ಎಂದು ರವಿ ಕುಮಾರ್ ತಿಳಿಸಿದ್ದಾರೆ.

ಅವರು ಬೂತ್‌ಗಳಿಗಾಗಿ ಒಂದು ಕಾರ್ಯತಂತ್ರವನ್ನು ರೂಪಿಸಿದರು,  ಹೆಚ್ಚಾಗಿ ‘ಪೇಜ್ ಪ್ರಮುಖ್’ ಪರಿಕಲ್ಪನೆಯ ಮೇಲೆ ಅವಲಂಬಿತವಾಗಿದೆ, ಅಲ್ಲಿ ಪ್ರತಿ ಬೂತ್‌ನಿಂದ ಮತದಾರರ ಪಟ್ಟಿಯ ಒಂದು ಪುಟವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಯಿತು.

ಪ್ರತಿ ಪುಟದಲ್ಲಿ 10 ರಿಂದ 12 ಕುಟುಂಬಗಳ ಮತದಾರರ ಪಟ್ಟಿ ಇತ್ತು. ಈ ಮತದಾರರು ಬೂತ್‌ಗೆ ತಲುಪಿ ಬಿಜೆಪಿಗೆ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು ಪೇಜ್ ಪ್ರಮುಖ್ ಅವರ ಕೆಲಸವಾಗಿತ್ತು.

ಮಸ್ಕಿ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿಲ್ಲವಾದರೂ, ರವಿಕುಮಾರ್ ಅವರಿಗೆ ಮಸ್ಕಿಯಲ್ಲಿ ಚುನಾವಣಾ ಕೆಲಸ ಪ್ರಾರಂಭಿಸಲು ತಿಳಿಸಲಾಗಿದೆ. ನವೆಂಬರ್ 13 ರ ನಂತರ ಅವರು ಮಸ್ಕಿ ಕ್ಷೇತ್ರಕ್ಕೆ ತೆರಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com