ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ: ಶ್ರೀರಾಮುಲು 

ಜನಸೇವೆ ವಿಚಾರದಲ್ಲಿ ನಾನು ಹರಿಶ್ಚಂದ್ರನಂತೆ ನಿರಂತರ ಸೇವೆ ಮಾಡುತ್ತೇನೆ. ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ
ಶ್ರೀರಾಮುಲು
ಶ್ರೀರಾಮುಲು
Updated on

ಬಳ್ಳಾರಿ: ಜನಸೇವೆ ವಿಚಾರದಲ್ಲಿ ನಾನು ಹರಿಶ್ಚಂದ್ರನಂತೆ ನಿರಂತರ ಸೇವೆ ಮಾಡುತ್ತೇನೆ. ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. 

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ‌ದ ಅವರು, ಪಕ್ಷದ ವಿಚಾರದಲ್ಲಿ ಅಸಮಾಧಾನದ ಪ್ರಶ್ನೆಯೇ ಬರುವುದಿಲ್ಲ, ಜನರಿಂದ ಮೇಲೆ ಬಂದಿದ್ದೇನೆ ಎಲ್ಲಾ ಸವಾಲನ್ನು ನಾನು ಸ್ವೀಕರಿಸಲು ಸಿದ್ಧನಿದ್ದೇನೆ ಪಕ್ಷಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದಿದ್ದಾರೆ. 

ನನಗೆ ನೀಡಿರುವ ಖಾತೆ ಬಗ್ಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ, ಖಾತೆ ಬದಲಾವಣೆ ಕುರಿತಂತೆ ಮುಖ್ಯಮಂತ್ರಿಗಳ ಬಳಿ ಏನನ್ನೂ ಕೇಳೋದಿಲ್ಲ. ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ನಮ್ಮ ನಾಯಕರು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com