'ನನ್ನಂತ ಅರೆ ಹುಚ್ಚನ ತ್ಯಾಗದಿಂದಲೇ ಬಿಡಿಎ ಅಧ್ಯಕ್ಷನಾಗಿ ವಿಶ್ವನಾಥ್ ನಿಂದ ಕೋಟಿ ಕೋಟಿ ಲೂಟಿ'

ಯಡಿಯೂರಪ್ಪ ಆಪ್ತರ ವಿರುದ್ಧ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ವಾಗ್ದಾಳಿ ಮುಂದುವರಿಸಿದ್ದಾರೆ. ರೇಣುಕಾಚಾರ್ಯ, ಎಸ್ ಆರ್ ವಿಶ್ವನಾಥ್ ಮತ್ತು ಹರತಾಳು ಹಾಲಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಬೆಂಗಳೂರು: ಯಡಿಯೂರಪ್ಪ ಆಪ್ತರ ವಿರುದ್ಧ ಬಿಜೆಪಿ ಎಂಎಲ್ ಸಿ ಎಚ್.ವಿಶ್ವನಾಥ್ ವಾಗ್ದಾಳಿ ಮುಂದುವರಿಸಿದ್ದಾರೆ. ರೇಣುಕಾಚಾರ್ಯ, ಎಸ್ ಆರ್ ವಿಶ್ವನಾಥ್ ಮತ್ತು ಹರತಾಳು ಹಾಲಪ್ಪ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಂ.ಪಿ.ರೇಣುಕಾಚಾರ್ಯ ಮತ್ತು ನರ್ಸ್‌ ಜಯಲಕ್ಷ್ಮಿ ಪ್ರಕರಣ ಏನಾಯಿತು. ಎಸ್‌.ಆರ್‌. ವಿಶ್ವನಾಥ್‌ ಒಬ್ಬ ಬಚ್ಚಾ. ನನ್ನಂತ ಅರೆ ಹುಚ್ಚನ ತ್ಯಾಗದಿಂದಲೇ ಆತ ಬಿಡಿಎ ಅಧ್ಯಕ್ಷನಾಗಿ ಕೋಟಿ ಕೋಟಿ ಲೂಟಿ ಮಾಡಿದ್ದಾನೆ ಎಂದು ತಿರುಗೇಟು ನೀಡಿದ್ದಾರೆ. 

ಹಾಲಪ್ಪ ತನ್ನ ಸ್ನೇಹಿತನ ಮನೆಗೆ ಹೋಗಿ ಅತ್ಯಾಚಾರ ಮಾಡಿದ’ ಎಂದು ಹರಿಹಾಯ್ದರು. ಇನ್ನು ವಿಶ್ವನಾಥ್ ಆರೋಪಕ್ಕೆ ಪ್ರತಿಕ್ರಿಯಿರುವ ಶಾಸಕ ಹಾಲಪ್ಪ ‘ನನ್ನ ವಿರುದ್ಧ ಮಾತನಾಡಿರುವ ವಿಶ್ವನಾಥ್‌ಗೆ ನ್ಯಾಯಾಲಯದ ಮೂಲಕವೇ ನೋಟಿಸ್ ಕೋಡುತ್ತೇನೆ. ನನ್ನ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿದೆ’ ಎಂದು ಹೇಳಿದರು.

‘ಇವರು ಯಾವ ಪಕ್ಷದಲ್ಲಿದ್ದರೂ ಆ ಪಕ್ಷಕ್ಕೆ ದ್ರೋಹ ಮಾಡಿದವರು. ಉಂಡ ಮನೆಗೆ ಎರಡು ಬಗೆಯುವುದು ಇವರ ಹುಟ್ಟು ಗುಣ. ಇವರ ಬಾಯಿಗೆ ಬೀಗ ಹಾಕದೇ ಇದ್ದರೆ ಪಕ್ಷಕ್ಕೆ ಮುಜುಗರ ತಪ್ಪಿದ್ದಲ್ಲ’ ಎಂದು ಹರತಾಳು ಹಾಲಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com