ಹೊಸಪೇಟೆ(ವಿಜಯನಗರ): ಇಂದು ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಸಿಕ್ಕಿದ ದಿನ ಖುಷಿಯಲ್ಲಿದ್ದೇವೆ, ಏನೂ ಹೇಳುವುದಿಲ್ಲ, ನಾಳೆ ನಿಮಗೆ ಉತ್ತರಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕುತೂಹವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಲಾಖೆಯ ಪೂರ್ವಭಾವಿ ಸಭೆ ಇದೆ ಬನ್ನಿ ಎಂದು ನಿನ್ನೆ ಸಿಎಂ ಬೊಮ್ಮಾಯಿಯವರು ಫೋನ್ ಮಾಡಿ ಹೇಳಿದ್ದರು. ಆಗ ನನ್ನ ಖಾತೆ ಹಂಚಿಕೆ ಬದಲಾವಣೆ ಬಗ್ಗೆ ಏನೂ ಚರ್ಚೆ ಮಾಡಿಲ್ಲ, ಅವರಲ್ಲಿ ನನ್ನ ವಿಚಾರಗಳನ್ನು, ಅಸಮಾಧಾನ, ಬೇಡಿಕೆಗಳನ್ನು ಈಗಾಗಲೇ ಭೇಟಿ ಮಾಡಿ ಹೇಳಿದ್ದೇನೆ ಎಂದರು.
ಇವತ್ತು ಬೆಂಗಳೂರಿಗೆ ಹೋಗಲ್ಲ, ಇವತ್ತು ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಿದೆ, ನಮಗೆ ಸ್ವಾತಂತ್ರ್ಯ ನೀಡಿ, ನಾಳೆ ಇದೇ ಪ್ರಶ್ನೆಯನ್ನು ಕೇಳಿದರೆ ಹೇಳುತ್ತೇನೆ, ಇಂದು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದರು.
ರಾಜಕೀಯದ ಬಗ್ಗೆ ಇಂದು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈಗಾಗಲೇ ಪ್ರತಿಕ್ರಿಯೆ ನೀಡಿದ್ದೇನೆ, ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ. ನನ್ನ ವಿಚಾರಗಳನ್ನು, ಭಾವನೆಗಳನ್ನು ಸಿಎಂಗೆ ಹೇಳಿದ್ದೇನೆ.
Advertisement