'ತೆನೆ' ಇಳಿಸಿ 'ಕಮಲ' ಹಿಡಿಯಲು ಸಂದೇಶ್ ನಾಗರಾಜ್ ಮುಂದು: ಬಿಜೆಪಿಯಿಂದ ವಿಧಾನ ಪರಿಷತ್ ಗೆ ಟಿಕೆಟ್ ಸಿಗುವ ವಿಶ್ವಾಸ

ಇನ್ನೆರಡು ಮೂರು ದಿನಗಳಲ್ಲಿ ನಾನು ಜೆಡಿಎಸ್ ತೊರೆಯುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅಧಿಕೃತವಾಗಿ ಹೇಳಿದ್ದಾರೆ. 
ಸಂದೇಶ್ ನಾಗರಾಜ್
ಸಂದೇಶ್ ನಾಗರಾಜ್

ಮೈಸೂರು: ಇನ್ನೆರಡು ಮೂರು ದಿನಗಳಲ್ಲಿ ನಾನು ಜೆಡಿಎಸ್ ತೊರೆಯುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅಧಿಕೃತವಾಗಿ ಹೇಳಿದ್ದಾರೆ. 

ಮೈಸೂರಿನಲ್ಲಿಂದು ಮಾತನಾಡಿರುವ ಅವರು, ನಾನು ಮೂರು ವರ್ಷಗಳಿಂದ ಜೆಡಿಎಸ್ ಸಂಪರ್ಕದಲ್ಲಿಲ್ಲ, ಜೆಡಿಎಸ್ ನಾಯಕರ ಜೊತೆ ಕೂಡ ಒಡನಾಟವಿಲ್ಲ, ಇನ್ನು ಎರಡ್ಮೂರು ದಿನಗಳಲ್ಲಿ ಜೆಡಿಎಸ್ ತೊರೆಯಲಿದ್ದು, ಬಿಜೆಪಿ ಸೇರುತ್ತೇನೆ. ಬಿಜೆಪಿಯಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಲು ಟಿಕೆಟ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಬಿಜೆಪಿ ಸೇರಿದ ಬಳಿಕ ಜೆಡಿಎಸ್ ತೊರೆಯಲು ಕಾರಣ ತಿಳಿಸುತ್ತೇನೆ, ನಾನು ಆ ಪಕ್ಷದಲ್ಲಿ ಇಷ್ಟು ದಿನ ದೈಹಿಕವಾಗಿ ಇದ್ದೆನಷ್ಟೆ ಹೊರತು ಮಾನಸಿಕವಾಗಿ ಇರಲಿಲ್ಲ. ಕುಮಾರಸ್ವಾಮಿಗೆ ನಾನು ಜೆಡಿಎಸ್ ನಲ್ಲಿರುವುದು ಬೇಕಿಲ್ಲ ಎನಿಸುತ್ತದೆ, ನನ್ನ ಅಗತ್ಯ ಅಲ್ಲಿ ಇಲ್ಲದ ಮೇಲೆ ಆ ಪಕ್ಷದಲ್ಲಿದ್ದುಕೊಂಡು ಏನು ಉಪಯೋಗ ಎಂದು ಹೇಳಿದ್ದಾರೆ. 

ಈ ಮೂಲಕ ಜೆಡಿಎಸ್ ನಲ್ಲಿ ಮತ್ತೊಬ್ಬ ಪ್ರಮುಖ ನಾಯಕರು ತೊರೆಯುವುದು ಸ್ಪಷ್ಟವಾಗಿದೆ. ಈಗಾಗಲೇ ಜಿ ಟಿ ದೇವೇಗೌಡ ಮತ್ತು ಕೋಲಾರ ಶಾಸಕ ಶ್ರೀನಿವಾಸ ಗೌಡ ಪಕ್ಷ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com