'ಸಮ-ಬೆಸ ನಾಟಕ, ವಾಹನಗಳ ಆನ್‌, ಆಫ್‌ ನೌಟಂಕಿ: ಉಚಿತ ಕೊಡುಗೆಗಳಿಗೆ ಮತ ಹಾಕಿದ್ದರ ಫಲಿತಾಂಶ'

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದಕ್ಕೆ ಉಚಿತ ಕೊಡುಗೆಗಳಿಗಾಗಿ ಮತ ಹಾಕಿದ್ದರ ಫಲಿತಾಂಶ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆರೋಪಿಸಿದ್ದಾರೆ.
ಬಿ.ಎಲ್ ಸಂತೋಷ್
ಬಿ.ಎಲ್ ಸಂತೋಷ್
Updated on

ಬೆಂಗಳೂರು: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದಕ್ಕೆ ಉಚಿತ ಕೊಡುಗೆಗಳಿಗಾಗಿ ಮತ ಹಾಕಿದ್ದರ ಫಲಿತಾಂಶ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಂತೋಷ್, 'ಉಚಿತ ವಿದ್ಯುತ್‌, ಉಚಿತ ನೀರು, ಉಚಿತ ಬಸ್‌ ಸಂಚಾರ, ವಾಹನಗಳ ಆನ್‌ ಮತ್ತು ಆಫ್‌ ಎಂಬ ನೌಟಂಕಿ, ಸಮ ಮತ್ತು ಬೆಸ ಎಂಬ ನಾಟಕಗಳಿಗೆ ಮತ ಹಾಕಿದ್ದರ ಫಲಿತಾಂಶ ಇವತ್ತಿನ ದೆಹಲಿಯ ಆಕಾಶ ದೇಶವಾಸಿಗಳೇ...' ಎಂದಿದ್ದಾರೆ.

ಆಕಾಶದ ತುಂಬ ಕವಿದ ಹೊಗೆ ಮಿಶ್ರಿತ ಗಾಳಿಯಲ್ಲಿ ಮುಚ್ಚಿ ಹೋಗಿರುವ ಇಂಡಿಯಾ ಗೇಟ್‌ ಚಿತ್ರವನ್ನು ಟ್ವೀಟ್‌ ಮಾಡಿರುವ ಬಿ.ಎಲ್‌. ಸಂತೋಷ್‌ ಅವರು ಉಚಿತ ಕೊಡುಗೆಗಳಿಗೆ ಮತ ಹಾಕಿದ್ದರ ಫಲಿತಾಂಶವಿದು ಎಂದಿದ್ದಾರೆ.

'ರೆವಡಿ (ಒಂದು ಬಗೆಯ ತಿನಿಸು) ರಾಜಕೀಯದ ಬಗ್ಗೆ ಜಾಗ್ರತೆಯಿಂದಿರಿ' ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಟ್ಟಿರುವುದರಿಂದ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದ ವರೆಗೆ ರಜೆ ಘೋಷಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com