ಉಮೇಶ್ ಕತ್ತಿ ಹಠಾತ್ ನಿಧನ: ಆರೋಗ್ಯದ ವಿಷಯದಲ್ಲಿ ರಾಜಕಾರಣಿಗಳ ತೀವ್ರ ಲಕ್ಷ್ಯ; ಜ್ವರ-ಕೆಮ್ಮಿಗೂ ಆಸ್ಪತ್ರೆಗೆ ದಾಖಲು!

ಅರಣ್ಯ ಸಚಿವ ಉಮೇಶ ಕತ್ತಿ (61) ಹೃದಯಾಘಾತದಿಂದ ಹಠಾತ್ ನಿಧನವಾದ ನಂತರ, ರಾಜಕಾರಣಿಗಳು ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ.
ಸುಧಾಕರ್ ಮತ್ತು ಆನಂದ್ ಮಾಮನಿ
ಸುಧಾಕರ್ ಮತ್ತು ಆನಂದ್ ಮಾಮನಿ
Updated on

ಬೆಂಗಳೂರು: ಅರಣ್ಯ ಸಚಿವ ಉಮೇಶ ಕತ್ತಿ (61) ಹೃದಯಾಘಾತದಿಂದ ಹಠಾತ್ ನಿಧನವಾದ ನಂತರ, ರಾಜಕಾರಣಿಗಳು ಅವಕಾಶಗಳನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ. ಜ್ವರ ಅಥವಾ ಕೆಮ್ಮು ಬಂದರೂ ನಿರ್ಲಕ್ಷ್ಯ ಮಾಡದೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿವೇಶನಕ್ಕೆ ಗೈರಾಗುತ್ತಿದ್ದಾರೆ.

ಕೆಲ ದಿನಗಳಿಂದ ಸದನಕ್ಕೆ ಗೈರು ಹಾಜರಾಗಿದ್ದ ವಿಧಾನಸಭಾ ಉಪಸಭಾಪತಿ ಹಾಗೂ ಯೆಲ್ಲಮ್ಮ ಶಾಸಕ ಆನಂದ್ ಮಾಮನಿ ಅನಾರೋಗ್ಯದ ಕಾರಣದಿಂದ ಚೆನ್ನೈಗೆ ತೆರಳಿದ್ದಾರೆ. ಅವರ ಬೆಂಬಲಿಗರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಮಾಮನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೀಡಿಯೊವನ್ನು ಹಾಕಿ, ತಾವು ಆರೋಗ್ಯದಿಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ನನ್ನ ಹಲವು ಶಾಸಕ ಸ್ನೇಹಿತರ ಸಲಹೆಯಂತೆ ನಾನು ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದೇನೆ. ನಾನು ತೀವ್ರವಾಗಿ ಅಸ್ವಸ್ಥನಾಗಿದ್ದೇನೆ ಎಂಬ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಉನ್ನತ ವೈದ್ಯಕೀಯ ತಜ್ಞರನ್ನು ಸಂಪರ್ಕಿಸಿದ ನಂತರ ನಾನು ಬೆಂಗಳೂರಿಗೆ ಹಿಂತಿರುಗುತ್ತೇನೆ ಎಂದು ಟ್ವಿಟರ್‌ನಲ್ಲಿ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮಾಮನಿ ಗೈರು ಹಾಜರಾದ ಕಾರಣ ಕುಮಾರ್ ಬಂಗಾರಪ್ಪ ಅವರು ಸಭಾಧ್ಯಕ್ಷರ ಆಸನದಲ್ಲಿ ಕುಳಿತರು.

ಇದೇ ವೇಳೆ ಬಿಜೆಪಿ ಸರ್ಕಾರದ ಸಂಭ್ರಮಾಚರಣೆ ಜನಸ್ಪಂದನದಲ್ಲಿ ನಿರತರಾಗಿದ್ದ ಆರೋಗ್ಯ ಸಚಿವ ಕೆ.ಸುಧಾಕರ್ ಕೂಡ ಸುಸ್ತಾಗಿದ್ದು, ಸದನದಲ್ಲಿ ಗೈರಾಗಿದ್ದರು. ಸುಧಾಕರ್ ಕೂಡ ಟ್ವಿಟ್ಟರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದು, “ಅನಾರೋಗ್ಯದ ಕಾರಣ ವೈದ್ಯರು ಕೆಲವು ದಿನಗಳ ವಿಶ್ರಾಂತಿಗೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕಾಗಿ ನಾನು ಸದನದ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com