ತುಮಕೂರಿನಲ್ಲಿ ಪಂಚರತ್ನ ಯಾತ್ರೆ ಅಬ್ಬರ: ಕೊರಟಗೆರೆಯಲ್ಲಿ ಕುಮಾರಸ್ವಾಮಿಗೆ ಪ್ರೀತಿಯ ಮಳೆಗರೆದ ಜನರು; ಪರಮೇಶ್ವರ್ ಗೆ ಆತಂಕ ಶುರು!

  ಜೆಡಿಎಸ್ ಮುಖಂಡ  ಎಚ್.ಡಿ ಕುಮಾರಸ್ವಾಮಿ ನಡೆಸಿದ 2ದಿನಗಳ  ಪಂಚರತ್ನ ಯಾತ್ರೆಗೆ ಬಂದ ಭರ್ಜರಿ ಪ್ರತಿಕ್ರಿಯೆಯಿಂದಾಗಿ  ಮಾಜಿ ಡಿಸಿಎಂ ಪರಮೇಶ್ವರ ಅವರಿಗೆ ಇರುಸು ಮುರುಸು ಉಂಟುಮಾಡಿದೆ.
ಪರಮೇಶ್ವರ್ ಮತ್ತು ಎಚ್ .ಡಿ ಕುಮಾರಸ್ವಾಮಿ
ಪರಮೇಶ್ವರ್ ಮತ್ತು ಎಚ್ .ಡಿ ಕುಮಾರಸ್ವಾಮಿ

ಬೆಂಗಳೂರು: 2023ರ  ವಿಧಾನಸಭೆ ಚುನಾವಣೆಗಾಗಿ ಸುರಕ್ಷಿತ ಸ್ಥಾನದ ಹುಡುಕಾಟದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಮಾತ್ರವಲ್ಲ,  2013ರಲ್ಲಿ ದಯನೀಯವಾಗಿ ಕೊರಟಗೆರೆಯಲ್ಲಿ ಸೋತಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೂ ಸಂಕಟ ಎದುರಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗಾಗಿಗ ಪುತ್ರ ಯತೀಂದ್ರ  ವರುಣಾ ಕ್ಷೇತ್ರ ತ್ಯಾಗ ಮಾಡಲು ಸಿದ್ದರಾಗಿದ್ದಾರೆ, ಆದರೆ ಪರಮೇಶ್ವರ್ ಗೆ ಪರ್ಯಾಯ ಸೇಫ್ ಕ್ಷೇತ್ರ ಯಾವುದು ಇಲ್ಲ,  ಜೆಡಿಎಸ್ ಮುಖಂಡ  ಎಚ್.ಡಿ ಕುಮಾರಸ್ವಾಮಿ ನಡೆಸಿದ 2ದಿನಗಳ  ಪಂಚರತ್ನ ಯಾತ್ರೆಗೆ ಬಂದ ಭರ್ಜರಿ ಪ್ರತಿಕ್ರಿಯೆಯಿಂದಾಗಿ  ಮಾಜಿ ಡಿಸಿಎಂ ಪರಮೇಶ್ವರ ಅವರಿಗೆ ಇರುಸು ಮುರುಸು ಉಂಟುಮಾಡಿದೆ.

ಕೊರಟಗೆರೆ ಕ್ಷೇತ್ರದ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಕುಮಾರಸ್ವಾಮಿಗೆ ಪ್ರೀತಿಯ ಮಳೆಗರೆದಿದ್ದಾರೆ.  ಕೊಬ್ಬರಿ, ಕಡಲೆಕಾಯಿ, ರಾಗಿಯ ಹಾರ ಅರ್ಪಿಸಿದರು,  ಜೊತೆಗೆ ಮುಂದಿನ ಸಿಎಂ ಆಗಬೇಕೆಂದು ಆಶೀರ್ವದಿಸಿದರು. ತೋವಿನಕೆರೆ ಗ್ರಾಮದಲ್ಲಿ ಬೆಳಗ್ಗಿನ ಜಾವ 2 ಗಂಟೆ ವರೆಗೂ ಕುಮಾರಸ್ವಾಮಿಗಾಗಿ ಕಾದು ಕೂತರು.

ಕುಮಾರಸ್ವಾಮಿ ಹೋದಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಇದು ಸಹಜ, ಆದರೆ ಜಾತಿಯ ವಿಷಯಕ್ಕೆ ಸಂಬಂಧಿಸಿದ್ದು, ನಾವು ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.  ಕುಮಾರಸ್ವಾಮಿ ಒಕ್ಕಲಿಗ ಸಮುದಾಯವನ್ನು ಓಲೈಸುತ್ತಿದ್ದಾರೆ. ಎಸ್‌ಸಿ ಎಡ ಸಮುದಾಯದ ನಾಯಕ ಬಿಎಚ್ ಅನಿಲ್ ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಜೆ.ಪಿ ಅವರನ್ನು ಕಣಕ್ಕಿಳಿಸುವ ಮೂಲಕ ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿಗೆ ಸಾಧ್ಯವಾದರೆ, ಪರಮೇಶ್ವರ್ ಗೆ ಕ್ಷೇತ್ರದಲ್ಲಿ ಗೆಲುವು ಸುಲಭ ಸಾಧ್ಯವಲ್ಲ ಎಂದು ಪರಮೇಶ್ವರ್ ಆಪ್ತ ಮತ್ತು ಒಕ್ಕಲಿಗ ನಾಯಕರೊಬ್ಬರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಒಬಿಸಿಗಳು ಕೊನೆಯ ಕ್ಷಣದವರೆಗೂ ಅವರ ಸಂದೇಶಕ್ಕಾಗಿ ಕಾಯಬಹುದು, ಆದರೆ ಎಸ್‌ಟಿ ನಾಯಕರು ಬಿಜೆಪಿಯೊಂದಿಗೆ ಹೋಗುವ ಸಾಧ್ಯತೆಯಿದೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ. ಅಲ್ಪಸಂಖ್ಯಾತರು ಮತ್ತು ಎಸ್‌ಸಿಗಳ ಒಂದು ವಿಭಾಗವನ್ನು ಹೊರತುಪಡಿಸಿ, ಇತರ ಜಾತಿ ಗುಂಪುಗಳು ಪರಮೇಶ್ವರ ವಿರುದ್ಧ ಧನಿ ಎತ್ತುತ್ತಿನೆ ಮತ್ತೆ ಕೆಲವು ಗುಂಪುಗಳು ಒಗ್ಗೂಡುತ್ತಿವೆ, ಇದರ ಪರಿಣಾಮವಾಗಿ 2013 ರ ಪರಿಸ್ಥಿತಿ ಉಂಟಾಗಿದೆ.

ಕ್ಷೇತ್ರದಲ್ಲಿ ಅಷ್ಟೊಂದು ಪರಿಚಿತರಲ್ಲದ ಜೆಡಿಎಸ್ ನ ಪಿ ಸುಧಾಕರ್ ಲಾಲ್  2013 ರಲ್ಲಿ ದಲಿತ ನಾಯಕ ಪರಮೇಶ್ವರ ಅವರನ್ನು ಸೋಲಿಸಿ  ಪ್ರಭಾವಿಯಾಗಿ ಹೊರ ಹೊಮ್ಮಿದ್ದರು. ಮತ್ತೊಮ್ಮೆ ಕುಮಾರಸ್ವಾಮಿ ಅವರ ಪ್ರಚಾರವು ವಿಧಾನಸಭಾ ಚುನಾವಣೆಗೆ ಮುನ್ನ ಅವರ ನೈತಿಕತೆಯನ್ನು ಹೆಚ್ಚಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಅವರು ಸಿಎಂ ಸ್ಥಾನದ ರೇಸ್‌ನಲ್ಲಿದ್ದರೂ,  ಆದರೆ ಸೋತ ನಂತರ ಕಾಂಗ್ರೆಸ್ ನಾಯಕರು ತಮ್ಮ ವಿರುದ್ಧ ಷಡ್ಯಂತ್ರ ನಡೆಸಿದ್ದರು ಎಂದು ಹೇಳಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com