3ನೇ ತಲೆಮಾರಿನ ರಾಜಕಾರಣಕ್ಕೆ ಸಿದ್ದರಾಮಯ್ಯ ಕುಟುಂಬ ಸಜ್ಜು: ತಾತನ ಪರ ಪ್ರಚಾರದಲ್ಲಿ ಮೊಮ್ಮಗ ಧವನ್ ರಾಕೇಶ್ ಭಾಗಿ!

ಮೂರನೇ ತಲೆಮಾರಿನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬ ಸಿದ್ಧವಾಗುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಈಗ ಸಿದ್ದರಾಮಯ್ಯ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.
ಧವನ್ ಮತ್ತು ಸಿದ್ದರಾಮಯ್ಯ
ಧವನ್ ಮತ್ತು ಸಿದ್ದರಾಮಯ್ಯ

ಮೈಸೂರು: ಮೂರನೇ ತಲೆಮಾರಿನ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬ ಸಿದ್ಧವಾಗುತ್ತಿದೆಯೇ? ಇಂತಹದ್ದೊಂದು ಪ್ರಶ್ನೆ ಈಗ ಸಿದ್ದರಾಮಯ್ಯ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.

ಇದಕ್ಕೆ ಪೂರಕವೆನ್ನುವಂತೆ ಅವರ ಮೊಮ್ಮಗ ದಿವಂಗತ ರಾಕೇಶ್ ಸಿದ್ದರಾಮಯ್ಯ ಪುತ್ರ ಧವನ್ ತಾತ ಸಿದ್ದರಾಮಯ್ಯ ಜೊತೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾನೆ. ಮೈಸೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ ಜೊತೆ ಧವನ್ ಕೂಡ ಓಡಾಟ ಆರಂಭಿಸಿದ್ದಾನೆ. ಈತನಿಗೆ ಚಿಕ್ಕಪ್ಪ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾರ್ಗದರ್ಶಿಯಾಗಿದ್ದಾರೆ.

ತಾತ ಹಾಗೂ ಚಿಕ್ಕಪ್ಪನ ಜೊತೆ ಚುನಾವಣಾ ಕಣದೊಳಗೆ ತಿರುಗುತ್ತಿರುವ ಧವನ್ ಗೆ ಎಲೆಕ್ಷನ್ ವಿಚಾರದ ಬಗ್ಗೆ ಬಹಳ ಕುತೂಹಲವಂತೆ. ಚುನಾವಣೆ ಎಂದರೇನು? ಅದು ಹೇಗಿರುತ್ತೆ? ಪ್ರಚಾರ ಶೈಲಿ ಮತ್ತು ಕಾರ್ಯ, ಜನರ ಒಡನಾಟ ಇವುಗಳೆಲ್ಲವನ್ನೂ ಹತ್ತಿರದಿಂದ ನೋಡಿ ತಿಳಿದುಕೊಳ್ಳುವ ಕುತೂಹಲ ಆತನದ್ದು. ಹೀಗಾಗಿ ಬಿರುಬೇಸಿಗೆಯಲ್ಲೂ ಆತ ಪ್ರಚಾರ ಕಾರ್ಯದ ವೇಳೆ ಮನೆಯ ಹಿರಿಯರೊಂದಿಗೆ ಉಪಸ್ಥಿತನಿದ್ದಾನೆ.

ಧವನ್‌ಗೆ ಅವರ ಅಪ್ಪನಂತೆ ರಾಜಕೀಯದಲ್ಲಿ ಆಸಕ್ತಿ ಜಾಸ್ತಿ ಹಾಗಾಗಿ ನಮ್ಮ ಜೊತೆ ಬಂದಿದ್ದಾನೆ. ಹುಡುಗ ನೋಡಿ ತಿಳ್ಕೋತೀನಿ ಅಂದ ಅದಕ್ಕೆ ನಾವೂ ಕರ್ಕೊಂಡು ಬಂದಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರೂ ಮೊಮ್ಮಗನ ಉಪಸ್ಥಿತಿ ಬಗ್ಗೆ ಹೆಮ್ಮೆಯಿಂದ ಮಾಧ್ಯಮದವರಿಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com