ಮದ್ದೂರು: ದುಡ್ಡು ಕೊಟ್ರೆ ಟೆರರಿಸ್ಟ್ ಗಳಿಗೂ ಟಿಕೆಟ್; ಜೆಡಿಎಸ್ ಸೇರ್ಪಡೆಯಾದ ಎಸ್ಎಂಕೆ ಸಹೋದರ ಪುತ್ರ ಗುರುಚರಣ್!

ಮದ್ದೂರು ಕ್ಷೇತ್ರದಿಂದ ಕದಲೂರು ಉದಯ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಎಸ್‌.ಎಂ.ಕೃಷ್ಣ ಅವರ ಅಣ್ಣನ ಮಗ ಎಸ್‌.ಗುರುಚರಣ್‌ ಗುರುವಾರ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರ್ಪಡೆಯಾದರು.
ಗುರುಚರಣ್
ಗುರುಚರಣ್

ಮಂಡ್ಯ: ಮದ್ದೂರು ಕ್ಷೇತ್ರದಿಂದ ಕದಲೂರು ಉದಯ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಎಸ್‌.ಎಂ.ಕೃಷ್ಣ ಅವರ ಅಣ್ಣನ ಮಗ ಎಸ್‌.ಗುರುಚರಣ್‌ ಗುರುವಾರ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರ್ಪಡೆಯಾದರು.

ಗುರುವಾರ ಬೆಳಿಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮದ್ದೂರು ತಾಲ್ಲೂಕು, ಸೋಮನಹಳ್ಳಿ ಗ್ರಾಮದ ಗುರುಚರಣ್‌ ನಿವಾಸಕ್ಕೆ ಭೇಟಿ ನೀಡಿದ್ದರು, ಈ ವೇಳೆ ಎಚ್ ಡಿಕೆ ಸಮ್ಮುಖದಲ್ಲಿ ಗುರುಚರಣ್‌ ಹಾಗೂ ಅವರ ಬೆಂಬಲಿಗರು ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್ ಸೇರ್ಪಡೆಯಾದ ನಂತರ ಮಾತನಾಡಿದ ಗುರುಚರಣ್, ಟಿಕೆಟ್ ಕೊಡುತ್ತೇವೆ ಎಂದು ಹೇಳಿ ನನ್ನನ್ನ ಮುಗಿಸಿದರು. ಕಾಂಗ್ರೆಸ್ ನಿರ್ನಾಮ ಕಾಲ ಹತ್ತಿರ ಬರುತ್ತಿದೆ ಎಂದರು. ಇನ್ನೂ ಮುಂದುವರಿದು ಮಾತನಾಡಿದ ಅವರು, ದುಡ್ಡು ಕೊಟ್ಟರೆ ಕಾಂಗ್ರೆಸ್ ನಲ್ಲಿ ಟೆರರಿಸ್ಟ್ ಗಳಿಗೂ ಟಿಕೆಟ್ ಕೊಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com