ತುಮಕೂರು: ಬಿಜೆಪಿ ನಾಯಕ ಸಿ.ಟಿ. ರವಿ ಒಬ್ಬ ಹುಚ್ಚ ಮತ್ತು ಜೆಡಿಎಸ್ ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಹಾವಾಡಿಗ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಟೀಕಿಸಿದ್ದಾರೆ.
ಸರ್ಕಾರ ಆರು ತಿಂಗಳಿಗೆ ಬೀಳುತ್ತದೆ ಎಂಬುವುದು ಸಿ.ಟಿ.ರವಿ ಅವರ ಅಭಿಪ್ರಾಯ ಇರಬಹುದು. ತುಮಕೂರಿನಲ್ಲಿ ಮಾತನಾಡಿದ ಅವರು ಅವೆಲ್ಲಾ ಹುಚ್ಚರ ಸ್ಟೇಟ್ಮೆಂಟ್, ಹುಚ್ಚರ ಸ್ಟೇಟ್ಮೆಂಟ್ಗೆಲ್ಲ ಉತ್ತರ ಹೇಳೋಕಾಗಲ್ಲ. ಆರು ತಿಂಗಳಿಗೆ ಬಿದ್ದೋಗುತ್ತೆ, ಮೂರು ತಿಂಗಳಿಗೆ ಬಿದ್ದೋಗುತ್ತೆ ಅದು ಅವರ ಅಭಿಪ್ರಾಯ ಇರಬಹುದು ಅಷ್ಟೇ. ಆ ಹೇಳಿಕೆಗೆ ಕಿಮ್ಮತ್ತು ಕೊಡೋ ಅವಶ್ಯಕತೆ ಇಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಅವರು ಸುಮ್ಮನೆ ಪೆನ್ಡ್ರೈವ್ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದರು. ಹಾವಾಡಿಗರನ್ನು ನೋಡಿದ್ದೀವಿ ನಾವು. ಒಂದು ಬುಟ್ಟಿಯನ್ನ ತಂದಿಟ್ಟು, ಇದರಲ್ಲಿ ಆ ಹಾವಿದೆ. ಈ ಹಾವಿದೆ, ಇದನ್ನ ಬಿಡ್ತೀನಿ, ಅದನ್ನ ಬಿಡ್ತೀನಿ ಅಂತಾ ತೋರಿಸಿದ್ದನ್ನ. ಹಾವಾಡಿಗರ ಆಟವನ್ನ ನೋಡಿದ್ದೀವಿ. ಅದಕ್ಕೂ ಇದಕ್ಕೂ ಸಾಮ್ಯತೆಯಿದೆ ಅಂತಾ ಯಾಕೆ ಭಾವಿಸಬಾರದು. ಏನಿದ್ರೆ ಬಿಡ್ಲಿ, ಬಿಡೋ ತಾಕತ್ತಿದ್ರೆ ಬಿಡ್ಲಿ ಅಂತಾ ಎಷ್ಟು ಜನ ಸಚಿವರು ಹೇಳಿದ್ದಾರೆ.
ಯಾರು ತಪ್ಪು ಮಾಡಿದ್ದಾರೆ ಅಂತ ಅದ್ರಲ್ಲಿ ಇದೆ ಅವರಿಗೆ ಸಾರ್ವಜನಿಕವಾಗಿ ಶಿಕ್ಷೆ ಆಗಲಿ. ಸುಮ್ನೆ ಪೆನ್ ಡ್ರೈವ್ ಇಟ್ಕೊಂಡು, ಇದೊಂತರ ಬ್ಲಾಕ್ ಮೇಲ್. ಬ್ಲಾಕ್ ಮೇಲ್ ಅಲ್ಲದೇ ಬೇರೇನಲ್ಲ ಇದು. ತೆಗೆಯೋದು, ಇಟ್ಕೋಳೋದು, ತಾಕತ್ತಿದ್ರೆ ರಿಲೀಸ್ ಮಾಡಲಿ ಎಂದು ಹೇಳಿದ್ದಾರೆ.
Advertisement