ತಪ್ಪಿ ಕೂಡ ನೀವು ಸಾಬ್ರಿಗೆ ವೋಟ್ ಹಾಕ್ಬಾರ್ದು, ವಿಜಯಪುರದಲ್ಲಿ ಇನ್ನು ಮುಂದೆ ಟಿಪ್ಪು ಸುಲ್ತಾನ್ ವಂಶದವರು ಆರಿಸಿ ಬರೋದಿಲ್ಲ: ಯತ್ನಾಳ್

ತಪ್ಪಿ ಕೂಡ ಸಾಬ್ರಿಗೆ ನೀವು ವೋಟ್ ಹಾಕ್ಬಾರ್ದು, ಇನ್ನು ಮುಂದೆ ವಿಜಯಪುರದಲ್ಲಿ ಯಾವ ಟಿಪ್ಪು ಸುಲ್ತಾನ್ ಆರಿಸಿ ಬರೋದಿಲ್ಲ, ಇನ್ನೇನಿದ್ದರೂ ಶಿವಾಜಿ ವಂಶದವರೇ ಆರಿಸಿ ಬರೋದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ತಪ್ಪಿ ಕೂಡ ಸಾಬ್ರಿಗೆ ನೀವು ವೋಟ್ ಹಾಕ್ಬಾರ್ದು, ಇನ್ನು ಮುಂದೆ ವಿಜಯಪುರದಲ್ಲಿ ಯಾವ ಟಿಪ್ಪು ಸುಲ್ತಾನ್ ಆರಿಸಿ ಬರೋದಿಲ್ಲ, ಇನ್ನೇನಿದ್ದರೂ ಶಿವಾಜಿ ವಂಶದವರೇ ಆರಿಸಿ ಬರೋದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕವಾಗಿ ಮಾತನಾಡಿದ್ದಾರೆ.

ಕಳೆದ ಭಾನುವಾರ ಇಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗೌಡ್ರೇ, ವಿಜಯಪುರದಲ್ಲಿ 1 ಲಕ್ಷ ಟಿಪ್ಪು ಸುಲ್ತಾನರಿದ್ದಾರೆ, ಆದರೂ ಶಿವಾಜಿ ಮಹಾರಾಜನ ವಂಶದ ನೀವು ಹೇಂಗೆ ಆರಿಸಿ ಬರುತ್ತೀರಿ ಎಂದು ರಾಜ್ಯದ ಅನೇಕ ಶಾಸಕರು ನನ್ನ ಕೇಳುತ್ತಾರೆ.

ಟಿಪ್ಪು ಸುಲ್ತಾನ್ ಮೆರವಣಿಗೆ ಮಾಡುವ ನಾಲಾಯಕ್ ಹಿಂದೂಗಳು ನಮ್ಮಲ್ಲಿದ್ದಾರೆ. ನೀನು ಹಿಂದೂ ಇದ್ದೀನಿ, ಹಿಂದುತ್ವವನ್ನು ನಾನು ಒಪ್ಪಲ್ಲ, ನಾನು ಅಪ್ಪಗೆ ಹುಟ್ಟಿದ್ದು ಖರೆ ಐತಿ, ಆದರೆ ಗ್ಯಾರಂಟಿ ಇಲ್ಲ,ನಾನು ಕುಂಕುಮ ಹಚ್ಚಿಕೊಳ್ಳಲ್ಲ, ಸಾಬರ ಟೊಪ್ಪಿ ಹಾಕೊಳ್ತೀನಿ, ನಾನು ರೇಷ್ಮೆ ಪಟಗಾ ಸುತ್ತಿಕೊಳ್ಳಲ್ಲ, ಸಾಬರು ಹಾಕುವ ಟೊಪ್ಪಿ ಹಾಕೊಳ್ಳುತ್ತೇನೆ ಎಂದೆಲ್ಲ ವೋಟಿನ ಸಮಯದಲ್ಲಿ ನಾಟಕ ಮಾಡ್ತಾರೆ ಎಂದು ವಿರೋಧ ಪಕ್ಷದವರ ಮೇಲೆ ಹರಿಹಾಯ್ದರು.

ಇನ್ನು ಮುಂದೆ ಟಿಪ್ಪು ಸುಲ್ತಾನ್ ಅನುಯಾಯಿಗಳು ವಿಜಯಪುರದಲ್ಲಿ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com