ಕಲಬುರಗಿ: ಯಾರವರು..? ಸುಮಲತಾ, ಅವರ ಪರಿಚಯವೇ ನನಗಿಲ್ಲ ಎಂದು ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಆ ಹೇಳಿಕೆ ನೀಡಿದವರು ನನಗೆ ಗೊತ್ತೆ ಇಲ್ಲ. ಅವರಿಗೂ ನನಗೆ ಸಂಬಂಧವೇ ಇಲ್ಲ ಎಂದು ಕಿಡಿ ಕಾರಿದರು.
ಒಳ ಒಪ್ಪಂದ, ಹೊರ ಒಪ್ಪಂದ ನಾನು ಮಾಡಿಕೊಂಡಿದ್ದೀನಾ? ಅವರ ಆತ್ಮಕ್ಕೆ ಅವರು ಮುಟ್ಟಿಕೊಂಡು ನೋಡಲಿ. ಲೋಕಸಭಾ ಚುನಾವಣೆಯಲ್ಲಿ ಯಾರ್ಯಾರು ಒಪ್ಪಂದ ಮಾಡಿಕೊಂಡಿದ್ದರು? ಏನು ನಡೆಯಿತು ಎಂದು ಜನತೆಗೆ ಗೊತ್ತಿದೆ ಎಂದರು.
ಈ ದೇಶದಲ್ಲಿ ಯಾರು ಬೇಕಾದರೂ, ಎಲ್ಲಿ ಬೇಕಾದರೂ ಚುನಾವಣೆಯನ್ನು ನಿಲ್ಲಬಹುದು ಎಂದು ಸುಮಲತಾ ಅವರು ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.
Advertisement