ಹುಬ್ಬಳ್ಳಿ: ಚುನಾವಣೆಯಲ್ಲಿ ಗೆಲ್ಲಲು ಪಕ್ಷ ಮತ್ತು ಅಭ್ಯರ್ಥಿ ಎರಡೂ ಮಾನದಂಡವಾಗುತ್ತದೆ ಎಂದು ಮಾಜಿ ಸಿಎಂ ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮತ ಚಲಾಯಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇವಲ ಪಕ್ಷ, ಮೋದಿಯವರ ಹೆಸರು ಹೇಳಿಕೊಂಡು ಮತ ಕೇಳಿದರೆ ಅಭ್ಯರ್ಥಿ ಗೆಲ್ಲುವುದಿಲ್ಲ, ವ್ಯಕ್ತಿಗತವಾದ ನಾಯಕತ್ವ, ಅಭ್ಯರ್ಥಿ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಮುಖ್ಯವಾಗುತ್ತದೆ. ವೈಯಕ್ತಿಕವಾದ ನಾಯಕತ್ವ ಜೊತೆಗೆ ಪಕ್ಷದ ಶಕ್ತಿಯೂ ಬೇಕು ಎಂದರು.
Advertisement