'ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಅವಮಾನಿಸಿ ಮತ್ತೊಂದು ಮಠ ಕಟ್ಟಿದ ಮಹಾನುಭಾವರು ನೀವಲ್ಲವೇ?'

ನಿಮ್ಮ ಹಿಂದಿನ ಅಕ್ರಮಗಳೆಲ್ಲ ಹೊರಬರುತ್ತವೆ ಎಂದು ಹೆದರಿ ನೀವು ಬಿಜೆಪಿ ಸೇರಿದ್ದೀರಿ, ಭತ್ತದ ತೆನೆ ಹೊತ್ತ (ಜೆಡಿಎಸ್ ಚಿಹ್ನೆ) ಮಹಿಳೆಯೊಬ್ಬರು ‘ಕೋಮು ಕುಂಡಕ್ಕೆ’ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್  ಲೇವಡಿ ಮಾಡಿದೆ.
ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ  ಆರೋಪ- ಪ್ರತ್ಯಾರೋಪಗಳು ತಾರಕಕ್ಕೇರಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ, ವಿಶೇಷವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಡುವೆ ರಾಜಕೀಯ ಜಿದ್ದಾಜಿದ್ದಿ ಮುಂದುವರಿದಿದ್ದು, ಇಬ್ಬರು ಪರಸ್ಪರರ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸುತ್ತಿದ್ದಾರೆ.

ಕೆಲವು ದಶಕಗಳ ಹಿಂದೆ ಒಕ್ಕಲಿಗ ಸಮುದಾಯದ ಧಾರ್ಮಿಕ ಶಕ್ತಿ ಕೇಂದ್ರವಾದ ಆದಿ ಚುಂಚನಗಿರಿ ಮಠಕ್ಕೆ ಸಮಾನಾಂತರವಾಗಿ ಮತ್ತೊಂದು ಮಠವನ್ನು ಸ್ಥಾಪಿಸಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಭೈರವೇಶ್ವರ ನಿಮ್ಮನ್ನು ಕ್ಷಮಿಸುವುದಿಲ್ಲ. ಎಲ್ಲರ ಆತ್ಮಗೌರವದ ಪ್ರತೀಕವಾಗಿರುವ ಆದಿ ಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಅವಮಾನಿಸಿ ಮತ್ತೊಂದು ಮಠ ಕಟ್ಟಿದ ಮಹಾನುಭಾವರು ನೀವಲ್ಲವೇ..?! ಎಂದು ಕಾಂಗ್ರೆಸ್ ಆರೋಪಿಸಿದೆ.

ನಿಮ್ಮ ಹಿಂದಿನ ಅಕ್ರಮಗಳೆಲ್ಲ ಹೊರಬರುತ್ತವೆ ಎಂದು ಹೆದರಿ ನೀವು ಬಿಜೆಪಿ ಸೇರಿದ್ದೀರಿ, ಭತ್ತದ ತೆನೆ ಹೊತ್ತ (ಜೆಡಿಎಸ್ ಚಿಹ್ನೆ) ಮಹಿಳೆಯೊಬ್ಬರು ‘ಕೋಮು ಕುಂಡಕ್ಕೆ’ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್  ಲೇವಡಿ ಮಾಡಿದೆ.

ಆತ್ಮೀಯ ಕುಮಾರಸ್ವಾಮಿ, ನಿಮ್ಮನ್ನು ಮೊದಲ ಬಾರಿಗೆ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೆ ದ್ರೋಹ ಬಗೆದಿದ್ದೀರಿ. ಕಾಂಗ್ರೆಸ್‌ ನಿಮ್ಮನ್ನು ಸಿಎಂ ಮಾಡಿದಾಗ ಶಿವಕುಮಾರ್‌, ಈ ಅಪ್ಪ-ಮಗನನ್ನು ನಂಬಬೇಡಿ, ನಿಮ್ಮನ್ನು ಬಳಸಿಕೊಂಡು ದೂರ ಎಸೆಯುತ್ತಾರೆ ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದ್ದರು. ಆದರೆ ಕಾಂಗ್ರೆಸ್‌ ಸಿದ್ಧಾಂತಕ್ಕಾಗಿ ನಿಮ್ಮೊಂದಿಗೆ ನಿಂತಿದೆ. ಈ ಮೂಲಕ ಕುಮಾರಸ್ವಾಮಿ ಎರಡನೇ ಬಾರಿಗೆ ಸಿಎಂ ಆದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜೆಡಿಎಸ್ ಮೈತ್ರಿಕೂಟದ ಪಾಲುದಾರರಾಗಿದ್ದಾಗ ಕಾಂಗ್ರೆಸ್ ಕಿರುಕುಳ ನೀಡಿತ್ತು. "ಇದು (ಕೆಪಿಸಿಸಿ) ತಿಹಾರ್ ಜೈಲ್ ಬರ್ಡ್ (ಶಿವಕುಮಾರ್) ಅನ್ನು ಅದರ ಅಧ್ಯಕ್ಷರನ್ನಾಗಿ ಸ್ವೀಕರಿಸಿದೆ" ಎಂದು ಅವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಕಿತ್ತೊಗೆದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ದ್ರೋಹ ಬಗೆದಿದ್ದರೂ ಪಕ್ಷವು ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದೆ. ಕಾಂಗ್ರೆಸ್ ಕೂಡ ಒಕ್ಕಲಿಗರನ್ನು ಪ್ರಚೋದಿಸುವ ಹೀನ ಪ್ರಯತ್ನ ಆರಂಭಿಸಿದೆ. ಒಕ್ಕಲಿಗರು ಸಂಸ್ಕೃತಿಹೀನರು ಎಂಬ ಕೊಳಕು ಹೇಳಿಕೆಯ ಹಿಂದೆ ಕಾಂಗ್ರೆಸ್‌ನ ಟೂಲ್‌ಕಿಟ್‌ ಷಡ್ಯಂತ್ರ ಅಡಗಿದೆ ಎಂದು ಜೆಡಿಎಸ್‌ ಆರೋಪಿಸಿದೆ.

ಜಾತ್ಯತೀತತೆ ತನ್ನದೇ ಎಂಬ ಹಸಿ ಸುಳ್ಳನ್ನು ಹೇಳುವ ಮೂಲಕ ಕಾಂಗ್ರೆಸ್ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಮನೆಯ ಹಿತ್ತಲಿನಲ್ಲಿ ಜಾತ್ಯತೀತತೆಯನ್ನು ಹೂತು ಹಾಕಿತು. ಈಗ ಜಾತಿ-ಜಾತಿ ಎಂಬ ಅಪಾಯಕಾರಿ ಆಟ ಆರಂಭಿಸಿ ಚುನಾವಣೆಗೂ ಮುನ್ನವೇ ಟೂಲ್‌ಕಿಟ್‌ ಸಿದ್ಧಪಡಿಸಿದ್ದಾರೆ ಎಂದು ಮಾಜಿ ಸಿಎಂ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com