social_icon

ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ತಂತ್ರ: ಕೌಂಟರ್ ಕೊಡಲು ಕಾಂಗ್ರೆಸ್ ನಿಂದ ಮೆಗಾ ರ‍್ಯಾಲಿಗೆ ಸಿದ್ಧತೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳಿಗೆ ಗೆಲ್ಲಲು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಹಳೆ ಮೈಸೂರು ಭಾಗ ಪ್ರಮುಖವಾದದ್ದು, ಹೇಳಿಕೇಳಿ ಇದು ಒಕ್ಕಲಿಗ ಸಮುದಾಯದ ಪ್ರಭಾವವಿರುವ ಭಾಗ. ಇಲ್ಲಿ ಸದ್ಯ ಜೆಡಿಎಸ್ ನ ಪ್ರಭಾವ ಹೆಚ್ಚಾಗಿದ್ದು ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದೆ. 

Published: 14th January 2023 07:49 AM  |   Last Updated: 14th January 2023 03:11 PM   |  A+A-


KPCC president D K Shivakumar and CLP leader Siddaramaiah

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಲ್ ಪಿ ನಾಯಕ ಸಿದ್ದರಾಮಯ್ಯ

Posted By : Sumana Upadhyaya
Source : The New Indian Express

ಮೈಸೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳಿಗೆ ಗೆಲ್ಲಲು ನಿರ್ಣಾಯಕವಾಗಿರುವ ಕ್ಷೇತ್ರಗಳಲ್ಲಿ ಹಳೆ ಮೈಸೂರು ಭಾಗ ಪ್ರಮುಖವಾದದ್ದು, ಹೇಳಿಕೇಳಿ ಇದು ಒಕ್ಕಲಿಗ ಸಮುದಾಯದ ಪ್ರಭಾವವಿರುವ ಭಾಗ. ಇಲ್ಲಿ ಸದ್ಯ ಜೆಡಿಎಸ್ ನ ಪ್ರಭಾವ ಹೆಚ್ಚಾಗಿದ್ದು ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದೆ. 

ಇಲ್ಲಿ ಹೇಗಾದರೂ ಮಾಡಿ ಈ ಬಾರಿ ಚುನಾವಣೆ ಗೆಲ್ಲಬೇಕು ಎಂಬ ಮಹದಾಸೆ, ಮಹತ್ವಾಕಾಂಕ್ಷೆಯನ್ನು ಬಿಜೆಪಿ ಹೊಂದಿದ್ದು ಅದರ ಸಲುವಾಗಿ ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಕ್ಕೆ ಬಂದು ಚುನಾವಣಾ ತಂತ್ರಗಾರಿಕೆ ಹೆಣೆದಿದ್ದರು. ಜೆಡಿಎಸ್ ವತಿಯಿಂದ ಈಗ ಪಂಚರತ್ನ ಯಾತ್ರೆ ನಡೆಯುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಸುಮ್ಮನೆ ಕೈಕಟ್ಟಿ ಕೂರುತ್ತದೆಯೇ, ಅದಕ್ಕೆ ಮೆಗಾ ರ್ಯಾಲಿ ಆಯೋಜಿಸಲು ಯೋಜನೆ ಹಾಕಿಕೊಳ್ಳುತ್ತಿದೆ.

ಒಕ್ಕಲಿಗ ಸಮುದಾಯದ ಪ್ರಭಾವ ಹೆಚ್ಚಾಗಿರುವ ಹಾಸನ, ಮಂಡ್ಯ, ಚಿಕ್ಕಮಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೆಗಾ ರ್ಯಾಲಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈಸೂರು, ಚಾಮರಾಜನಗರ, ಉಡುಪಿ ಮತ್ತು ಮಂಗಳೂರಿನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲು ಯೋಜನೆ ಮಾಡಿಕೊಂಡಿದೆ. ಪಕ್ಷದ ನಾಯಕರು ಪ್ರಜಾ ಧ್ವನಿ ಯಾತ್ರೆಗೆ ಕಾರ್ಯಕರ್ತರನ್ನು ಸೇರಿಸುವ ಉದ್ದೇಶ ಹೊಂದಿದ್ದಾರೆ. ಪ್ರಜಾಧ್ವನಿ ಯಾತ್ರೆ ಜನವರಿ 21 ಮತ್ತು 26ರಂದು ಚಿಕ್ಕಬಳ್ಳಾಪುರ, ಕೋಲಾರದಲ್ಲಿ ನಡೆಯಲಿದೆ.

ಆಡಳಿತಾರೂಢ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದೆ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಇದಕ್ಕಾಗಿ ಜನ ಕಾಂಗ್ರೆಸ್ ನತ್ತ ನೋಡುತ್ತಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಯಾತ್ರೆಯಲ್ಲಿ ಒಟ್ಟಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸೂಚನೆ ಮೇರೆಗೆ ಹೋಗಲಿದ್ದಾರೆ. ಮೂರು ತಿಂಗಳ ಚುನಾವಣಾ ಪ್ರಚಾರ ಬಸ್ ಗಳ ಮೂಲಕ ಸಾಗಲಿದ್ದು ಪಕ್ಷದ ಸಂಘಟನೆಯನ್ನು ಬಲಪಡಿಸಿ ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಹೇಳುತ್ತಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಯತ್ನ: 'ಹಳೆ ಮೈಸೂರು' ಭಾಗದಲ್ಲಿ ಪ್ರಾಬಲ್ಯ ಮೆರೆಯಲು ಹಲವು ತಂತ್ರ!

ರಾಜ್ಯ ಸರ್ಕಾರ ಕೇಂದ್ರದಿಂದ ತನ್ನ ಪಾಲಿನ 15 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಹಣವನ್ನು ಪಡೆಯುವ ಧೈರ್ಯದಲ್ಲಿಲ್ಲ. ಕರ್ನಾಟಕ ದೇಶದಲ್ಲಿಯೇ ಜಿಎಸ್ ಟಿ ಸಂಗ್ರಹದಲ್ಲಿ ಎರಡನೇ ರಾಜ್ಯವಾಗಿ ಹೊರಹೊಮ್ಮಿದಾಗ ಬಿಜೆಪಿಯ 25 ಮಂದಿ ಸಂಸದರಿಗೆ ಕೇಂದ್ರದಿಂದ ಹಣ ಬಿಡುಗಡೆ ಮಾಡುವಂತೆ ಒತ್ತಡ ಹಾಕುವ ಮನಸ್ಸು, ಧೈರ್ಯ ಇಲ್ಲದಿರುವುದು ದುರದೃಷ್ಟಕರ, ಈ ಬಾರಿ ಪ್ರವಾಹದಿಂದ ರಾಜ್ಯ ಕೇಳಿದ 85 ಸಾವಿರ ಕೋಟಿ ರೂಪಾಯಿ ಪರಿಹಾರಕ್ಕೆ ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ 10 ಸಾವಿರ ಕೋಟಿ ರೂಪಾಯಿ. ಡಬಲ್ ಎಂಜಿನ್ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಏಕೆ ಎಂದು ಕೇಳಿದರು.

ಬಜೆಟ್ ಅನುದಾನದ ಶೇಕಡಾ 42ರಷ್ಟನ್ನು ಮಾತ್ರ ಸರ್ಕಾರ ಖರ್ಚು ಮಾಡಿದೆ. ನೀರಾವರಿ ಯೋಜನೆಗಳು ಇನ್ನೂ ಸಂಪೂರ್ಣವಾಗಬೇಕಿರುವುದರಿಂದ ಕೃಷಿ ವಲಯಗಳು ರಾಜ್ಯದಲ್ಲಿ ತೀರಾ ಹದಗೆಟ್ಟು ಹೋಗಿದೆ. ಮುಂದಿನ ಎರಡು ತಿಂಗಳಲ್ಲಿ ಶೇಕಡಾ 60ರಷ್ಟು ಅನುದಾನವನ್ನು ಬಳಸಲು ಹೇಗೆ ಸಾಧ್ಯ ಎಂದು ಕೇಳಿದರು. 

ಕಾಂಗ್ರೆಸ್ ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತದೆ. ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇಕಡಾ 10 ಕ್ಕಿಂತ ಕಡಿಮೆ ಅನುಷ್ಠಾನಕ್ಕೆ ಬಿಜೆಪಿಯನ್ನು ಬಯಲಿಗೆಳೆಯುತ್ತದೆ. ರಾಮನಗರದಲ್ಲಿ ರಾಮ ಮಂದಿರ ಹಾಗೂ ಮಂಡ್ಯದಲ್ಲಿ ಹನುಮಾನ್ ಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ಘೋಷಣೆ ಮಾಡುವ ಮೂಲಕ ಜನರ ಭಾವನೆಗಳ ಜತೆ ಆಟವಾಡುತ್ತಿದೆ ಎಂದು ಟೀಕಿಸಿದರು.


Stay up to date on all the latest ರಾಜಕೀಯ news
Poll
Railways Minister Ashwini Vaishnaw waves at a goods train as train services resume

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೇ?


Result
ಹೌದು
ಬೇಡ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp