ಬಿ.ಎನ್ ಚಂದ್ರಪ್ಪ
ಬಿ.ಎನ್ ಚಂದ್ರಪ್ಪ

ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡಲ್ಲ: ಚಿತ್ರದುರ್ಗ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ (ಸಂದರ್ಶನ)

Published on

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಸ್ವಂತಿಕೆ ಇಲ್ಲದವರು ಜಾತಿ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ಅಪ್ಪಟ ಮಾದಿಗ ಸಮಾಜದಲ್ಲಿ ಹುಟ್ಟಿದ್ದೇನೆ ಎಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಹೇಳಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ನಿರ್ಧರಿಸಿದ್ದೇನೆ.

Q

ಚಿತ್ರದುರ್ಗದಿಂದ ಸ್ಪರ್ಧಿಸಲು ಸಾಕಷ್ಟು ಆಕಾಂಕ್ಷಿಗಳಿದ್ದರು, ಪಕ್ಷದ ಟಿಕೆಟ್ ಸಿಗುವುದು ಕಷ್ಟವಾಗಿತ್ತೆ?

A

ಟಿಕೆಟ್ ಪಡೆಯಲು ಯಾವುದೇ ತೊಂದರೆ ಇರಲಿಲ್ಲ, ನಾನು ಯಾವುದೇ ಲಾಬಿ ಮಾಡಿಲ್ಲ. ಸಂಸದನಾಗಿ ನನ್ನ ಹಿಂದಿನ ಅನುಭವವನ್ನು ಪರಿಗಣಿಸಿ ಪಕ್ಷ ನನ್ನನ್ನು ಆಯ್ಕೆ ಮಾಡಿದೆ. ಆದರೆ ಈ ನಡುವೆ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು, ಕೊನೆಗೆ ಹೈಕಮಾಂಡ್ ನನಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಅಂತಿಮ ಪಟ್ಟಿಯಲ್ಲಿ ಕೆಪಿಸಿಸಿ ಕೂಡ ಒಂದೇ ಹೆಸರನ್ನು ಕಳುಹಿಸಿದೆ.

Q

ಯಾವ ಆಧಾರದ ಮೇಲೆ ಮತ ಕೇಳುತ್ತಿದ್ದೀರಿ?

A

ಮತದಾರರೊಂದಿಗೆ ನನ್ನ ಸಂಪರ್ಕ ಹೊಸದಲ್ಲ. ನಾನು ಸೋತರೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ನಾನು ಎಂದಿಗೂ ಸಂಪರ್ಕ ಕಳೆದುಕೊಂಡಿಲ್ಲ, ಪಕ್ಷಕ್ಕಾಗಿ ದುಡಿದಿದ್ದೇನೆ. ಈಗ, ನಾನು ಹೆಚ್ಚು ಕೆಲಸ ಮಾಡಲು ಬಯಸುತ್ತೇನೆ. ಏಕೆಂದರೆ ನಾನು ಕಳೆದ ಬಾರಿ ಸೋತಿದ್ದೇನೆ. ಈ ಬಾರಿ ನನ್ನನ್ನು ದೊಡ್ಡ ರೀತಿಯಲ್ಲಿ ಬೆಂಬಲಿಸುವಂತೆ ಮತದಾರರಿಗೆ ತಿಳಿದಿದೆ.

Q

ಸಂಸದರಾಗಿ ಆಯ್ಕೆಯಾದರೆ ನೀವು ಪೂರ್ಣಗೊಳಿಸಲು ಬಯಸುವ ಯೋಜನೆಗಳು ಯಾವುವು?

A

ನಿರಂತರ ಬರದಿಂದ ಬಳಲುತ್ತಿರುವ ರೈತರ ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವುದು ನನ್ನ ಆದ್ಯತೆಯಾಗಿದೆ. ತುಮಕೂರು-ದಾವಣಗೆರೆ ರೈಲು ಮಾರ್ಗದ ಕಾಮಗಾರಿಯೂ ನಡೆಯಲಿದೆ. ಇದು ಚಿತ್ರದುರ್ಗ ಜಿಲ್ಲೆಯನ್ನು ಕೈಗಾರಿಕೀಕರಣಗೊಳಿಸಲು ಸಹಕಾರಿಯಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ತರುವುದು ಮತ್ತು ಕೇಂದ್ರೀಯ ವಿದ್ಯಾಲಯಗಳನ್ನು ಪ್ರಾರಂಭಿಸುವುದು ನನ್ನ ಇತರ ಗುರಿಗಳಾಗಿವೆ.

Q

ನಿಮ್ಮನ್ನು ಹೊರಗಿನವರು ಎಂದು ಕರೆಯಲಾಗುತ್ತಿದ್ದು, ಪಕ್ಷದ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ಬಯಸಿದ್ದರೇ?

A

ಕಾಂಗ್ರೆಸ್‌ ನಲ್ಲಿ ಹಲವು ಆಕಾಂಕ್ಷಿಗಳಿದ್ದರು, ಆದರೆ ನಾನು ಹೊರಗಿನವನಲ್ಲ. ನಾನು 2014 ರಿಂದ ಇಲ್ಲಿಯೇ ನೆಲೆಸಿದ್ದು ಸಾಣೇಹಳ್ಳಿಯ ಪಕ್ಕದಲ್ಲಿರುವ ತರೀಕೆರೆ ನನ್ನ ಹುಟ್ಟೂರು. ವಿರೋಧ ಪಕ್ಷದವರು ನನ್ನನ್ನು ಮೂಡಿಗೆರೆಯವರು ಎಂದು ಬಿಂಬಿಸಲು ಯತ್ನಿಸಿದರು.

Q

ನಿಮ್ಮನ್ನೂ ಮಾದಿಗೇತರರೆಂದು ಬಿಂಬಿಸಲಾಗಿದೆಯೇ?

A

ನನ್ನ ಸಮುದಾಯದವರು ನಾನು ಮಾದಿಗ ಅಲ್ಲ ಎಂದು ಆರೋಪ ಮಾಡಿರುವುದು ಬೇಸರದ ಸಂಗತಿ. ನಾನು ನನ್ನ ಶಾಲಾ ಪ್ರಮಾಣಪತ್ರವನ್ನು ಒದಗಿಸಿದ್ದೇನೆ, ಅದು ಆ ಸತ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ನಾನು ಕುವೆಂಪು, ನಾರಾಯಣಗುರು, ಕನಕದಾಸರು, ಬಸವಣ್ಣ ಮುಂತಾದವರ ಸಾಲಿನಲ್ಲಿ ಕೆಲಸ ಮಾಡುವ ವಿಶ್ವಮಾನವ.

Q

ಇಲ್ಲಿ ಮೋದಿ ಅಲೆ ಇದೆಯೇ?

A

ನಾನು ಇಲ್ಲಿ ಮೋದಿ ಅಲೆಯನ್ನು ಕಂಡಿಲ್ಲ. ಪ್ರಧಾನಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಾರ್ವಜನಿಕರ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ, ರಾಜ್ಯ ಸರ್ಕಾರ ಜಾರಿಗೆ ತಂದ ಐದು ಭರವಸೆಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿವೆ. ನಾನು ದೊಡ್ಡ ಅಂತರದಿಂದ ಗೆಲ್ಲಲಿದ್ದೇನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com