ಕೇಂದ್ರ ಸರ್ಕಾರವನ್ನು ದುರ್ಬಲಗೊಳಿಸಲು ಕೆಲ ದೇಶಗಳು, ಸಂಸ್ಥೆಗಳು ಬಯಸಿವೆ: ಪ್ರಧಾನಿ ಮೋದಿ

ಸುಲಭವಾಗಿ ಲಾಭ ಗಳಿಸಲು ಭಾರತ ಮತ್ತು ಕೇಂದ್ರ ಸರ್ಕಾರ ದುರ್ಬಲವಾಗಿರಬೇಕು ಎಂದು ಕೆಲವು ದೇಶಗಳು ಮತ್ತು ಸಂಸ್ಥೆಗಳು ಬಯಸುತ್ತಿವೆ. ಕಾಂಗ್ರೆಸ್ ಕೂಡ ಈ ಭ್ರಷ್ಟಾಚಾರದ ಫಲಾನುಭವಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದರು.
ಹೊಸಪೇಟೆಯಲ್ಲಿ ಪ್ರಧಾನಿ ಮೋದಿ
ಹೊಸಪೇಟೆಯಲ್ಲಿ ಪ್ರಧಾನಿ ಮೋದಿ
Updated on

ಹೊಸಪೇಟೆ: ಸುಲಭವಾಗಿ ಲಾಭ ಗಳಿಸಲು ಭಾರತ ಮತ್ತು ಕೇಂದ್ರ ಸರ್ಕಾರ ದುರ್ಬಲವಾಗಿರಬೇಕು ಎಂದು ಕೆಲವು ದೇಶಗಳು ಮತ್ತು ಸಂಸ್ಥೆಗಳು ಬಯಸುತ್ತಿವೆ. ಕಾಂಗ್ರೆಸ್ ಕೂಡ ಈ ಭ್ರಷ್ಟಾಚಾರದ ಫಲಾನುಭವಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, "ದೇಶವು ವೇಗವಾಗಿ ಚಲಿಸುತ್ತಿರುವಾಗ ಕೆಲವು ದೇಶಗಳು ಮತ್ತು ಸಂಸ್ಥೆಗಳು ಅದನ್ನು ಇಷ್ಟಪಡುವುದಿಲ್ಲ. ಬಲಿಷ್ಠ ಭಾರತವನ್ನು ಇಷ್ಟಪಡದ ಅನೇಕ ಜನರಿದ್ದಾರೆ. ಅವರು ದೇಶ ಮತ್ತು ಕೇಂದ್ರ ಸರ್ಕಾರವು ದುರ್ಬಲವಾಗಿರಬೇಕು, ಇದರಿಂದ ಸುಲಭವಾಗಿ ಲಾಭ ಗಳಿಸಬಹುದು ಎಂದು ಬಯಸುತ್ತಾರೆ ಎಂದರು.

ಹೊಸಪೇಟೆಯಲ್ಲಿ ಪ್ರಧಾನಿ ಮೋದಿ
ನೇಹಾ ಹತ್ಯೆ ಪ್ರಕರಣ: ಕರ್ನಾಟಕದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಇಡೀ ರಾಷ್ಟ್ರದಲ್ಲಿ ಆತಂಕ- ಪ್ರಧಾನಿ ಮೋದಿ

ದುರ್ಬಲ ಸರ್ಕಾರವು ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಕಾಂಗ್ರೆಸ್ ಕೂಡ ಈ ಭ್ರಷ್ಟಾಚಾರದ ಸ್ಪಷ್ಟ ಫಲಾನುಭವಿಯಾಗಿದೆ. ಈ ಆಟ ನಡೆಯುತ್ತಿತ್ತು ಆದರೆ ಬಿಜೆಪಿ ಅವರಿಗೆ ಸವಾಲಾಗಿ ಪರಿಣಮಿಸಿದೆ. ಯಾರೂ ಬಗ್ಗಿಸಲಾಗದ ಬಿಜೆಪಿ ಸರ್ಕಾರವಿದೆ ಎಂಬುದು ಅವರ ಆತಂಕವಾಗಿದೆ ಎಂದು ಪ್ರಧಾನಿ ಹೇಳಿದರು.

2014 ರ ಮೊದಲು ದಲ್ಲಾಳಿಗಳು ಅಧಿಕಾರದ ಕಾರಿಡಾರ್‌ಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬುದು ದೆಹಲಿಯ ಲೂಟಿಗೋರರನ್ನು ತಿಳಿದಿರುವವರಿಗೆ ಗೊತ್ತಿದೆ. ಲಾಬಿ ಮಾಡುವವರಿಗೆ ಹೋಟೆಲ್ ಸೂಟ್‌ಗಳನ್ನು ವರ್ಷಗಳ ಕಾಲ ಬುಕ್ ಮಾಡಲಾಗಿತ್ತು. 2014 ರ ನಂತರ ಅಧಿಕಾರದ ಕಾರಿಡಾರ್‌ಗಳಲ್ಲಿ ಸ್ವಚ್ಛತಾ ಅಭಿಯಾನವಿದೆ. ಬಿಜೆಪಿಯನ್ನು ಕಟ್ಟಿಹಾಕಲು ನೀವು ಎಷ್ಟೇ ಪ್ರಯತ್ನ ಪಟ್ಟರೂ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ ಎಂದರು.

ಭಾರತವು ಕೋಟ್ಯಂತರ ರೂಪಾಯಿ ಮೌಲ್ಯದ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಆದರೆ ತಮ್ಮ ಸರ್ಕಾರದ ಕ್ರಮದಿಂದಾಗಿ ದೇಶವು ದೊಡ್ಡ ಆಟಿಕೆ ರಫ್ತುದಾರನಾಗಿ ಮಾರ್ಪಟ್ಟಿದೆ. ಕರ್ನಾಟಕದಲ್ಲಿ ಬಿಜೆಪಿ ಬಿತ್ತಿದ ಅಭಿವೃದ್ಧಿಯ ಬೀಜಗಳನ್ನು ಕಾಂಗ್ರೆಸ್ ಸರ್ಕಾರ ನಾಶಪಡಿಸಿದೆ. ಕಾಂಗ್ರೆಸ್ ಕೆಲಸ ಮಾಡುವುದಿಲ್ಲ. ಬಿಜೆಪಿ ಮಾಡಿದ ಎಲ್ಲಾ ಒಳ್ಳೆಯ ಕೆಲಸಗಳನ್ನು ನಿಲ್ಲಿಸುತ್ತದೆ. ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ವಿದ್ಯುತ್ ಕೊರತೆಯನ್ನು ಸೃಷ್ಟಿಸಿತು. ವಿದ್ಯುತ್ ಇಲ್ಲದಿದ್ದರೆ ಕೈಗಾರಿಕೆಗಳು ಕುಸಿಯುತ್ತವೆ. ವಿದ್ಯುತ್ ಕೊರತೆಯು ಕರ್ನಾಟಕದ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದೆ ಎಂದು ಮೋದಿ ಆರೋಪಿಸಿದರು.

ಜಮ್ಮು ಮತ್ತು ಕಾಶ್ಮೀರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 370 ನೇ ವಿಧಿಯಿಂದಾಗಿ ಮೀಸಲಾತಿ ಸಿಗದ ಕಾರಣ ಕಾಂಗ್ರೆಸ್ "ಅನ್ಯಾಯ" ಮಾಡಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನ ಗೌರವಿಸಿ,

370 ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ SC/ST ಸಮುದಾಯಗಳಿಗೆ ಮೀಸಲಾತಿ ಹಕ್ಕುಗಳನ್ನು ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com