ರಾಯಚೂರು ಲೋಕಸಭೆ ಕ್ಷೇತ್ರ: ಸಮಸ್ಯೆಗಳು ಭರಪೂರ; ಅಖಾಡದಲ್ಲಿ ಮಾಜಿ ಐಎಎಸ್-ಹಾಲಿ ಸಂಸದರ ಸಮರ

ಮೇ 7 ರಂದು ನಡೆಯಲಿರುವ ಚುನಾವಣೆಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌ನ ಮಾಜಿ ಐಎಎಸ್ ಅಧಿಕಾರಿ ಕುಮಾರ್ ನಾಯ್ಕ್ ಮತ್ತು ಬಿಜೆಪಿಯ ಸಂಸದ ರಾಜಾ ಅಮರೇಶ್ವರ ನಾಯ್ಕ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಕುಮಾರ್ ನಾಯಕ್ ಮತ್ತು ರಾಜಾ ಅಮರೇಶ್ವರ ನಾಯ್ಕ್
ಕುಮಾರ್ ನಾಯಕ್ ಮತ್ತು ರಾಜಾ ಅಮರೇಶ್ವರ ನಾಯ್ಕ್
Updated on

ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ (ಎಸ್‌ಟಿ ಮೀಸಲು) ಮಾಜಿ ಅಧಿಕಾರಿ ಮತ್ತು ಹಾಲಿ ಸಂಸದರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಲ್ಯಾಣ ಕರ್ನಾಟಕದ ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಹೀಗಾಗಿ ಕಾಂಗ್ರೆಸ್‌ನ ಐದು ಭರವಸೆಗಳು ಮತ್ತು ಬಿಜೆಪಿಯ ಅಭಿವೃದ್ಧಿ ನಡುವಿನ ಸ್ಪರ್ಧೆಯಾಗಿದೆ.

ಮೇ 7 ರಂದು ನಡೆಯಲಿರುವ ಚುನಾವಣೆಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌ನ ಮಾಜಿ ಐಎಎಸ್ ಅಧಿಕಾರಿ ಕುಮಾರ್ ನಾಯ್ಕ್ ಮತ್ತು ಬಿಜೆಪಿಯ ಸಂಸದ ರಾಜಾ ಅಮರೇಶ್ವರ ನಾಯ್ಕ್ ನಡುವೆ ನೇರ ಹಣಾಹಣಿ ನಡೆಯಲಿದೆ. ಕುಮಾರ್ ನಾಯ್ಕ್ ಅವರು 1990-ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದು, ಅವರು ರಾಯಚೂರಿನಲ್ಲಿ 1999 ಮತ್ತು 2002 ರ ನಡುವೆ ಡೆಪ್ಯೂಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ರಾಜ್ಯದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಮಾಜಿ ಐಎಎಸ್ ಅಧಿಕಾರಿಯಾಗಿದ್ದಾರೆ. ಮತದಾರರನ್ನು ಓಲೈಸಲು ಡಿಸಿಯಾಗಿ ಅವರು ಮಾಡಿರುವ ಕೆಲಸಗಳ ಮೇಲೆ ಮತ ಕೇಳಲು ಕಾಂಗ್ರೆಸ್ ಪಕ್ಷವು ಮುಂದಾಗಿದೆ. ರವಿ ಪಾಟೀಲ್ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಕಾಂಗ್ರೆಸ್ ಮೂಲಗಳ ಪ್ರಕಾರ, ಡಿಸಿಯಾಗಿ ಕುಮಾರ್ ನಾಯಕ್ ಅವರ ಕೆಲಸ, ವಿಶೇಷವಾಗಿ ಬರ ಪರಿಸ್ಥಿತಿಯನ್ನು ನಿಭಾಯಿಸುವುದು, ನಗರದ ಹಳೆಯ ಕೆರೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಕುಮಾರ್ ನಾಯಕ್ ಅವರ ಕಾರ್ಯವನ್ನು ಹೊರತುಪಡಿಸಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಭರವಸೆಗಳು ಚುನಾವಣೆಯಲ್ಲಿ ಸಹಾಯ ಮಾಡುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕುಮಾರ್ ನಾಯಕ್ ಮತ್ತು ರಾಜಾ ಅಮರೇಶ್ವರ ನಾಯ್ಕ್
ಲೋಕಸಭೆ ಚುನಾವಣೆ 2024: ನಾನು ಬಸವಣ್ಣನವರ ಅನುಯಾಯಿ- ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಆಗ್ರಹಿಸಿ ರಾಯಚೂರು ಹೋರಾಟ ಸಮಿತಿ ನಡೆಸುತ್ತಿರುವ ವರ್ಷಪೂರ್ತಿ ಆಂದೋಲನಕ್ಕೆ ಕಾಂಗ್ರೆಸ್ ಬೆಂಬಲ ನೀಡಿರುವುದು ತನ್ನ ಅಭ್ಯರ್ಥಿಗೆ ನೆರವಾಗಲಿದೆ. ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯ್ಕ್ ಅವರು ಎರಡು ಬಾರಿ ಶಾಸಕರಾಗಿದ್ದು, ಕರ್ನಾಟಕದಲ್ಲಿಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವು ರಾಯಚೂರು ಜಿಲ್ಲೆಯನ್ನು ನೀತಿ ಆಯೋಗದಿಂದ ಮಹತ್ವಾಕಾಂಕ್ಷೆಯ ಜಿಲ್ಲೆಗಳ ವರ್ಗಕ್ಕೆ ಆಯ್ಕೆ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳು ತ್ವರಿತವಾಗಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಅಪೌಷ್ಟಿಕತೆ ಜಿಲ್ಲೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ.

ಟಿಕೆಟ್ ನಿರಾಕರಿಸಿದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಮಾಜಿ ಸಂಸದ ಬಿ.ವಿ.ನಾಯ್ಕ ಬೆದರಿಕೆ ಹಾಕಿದ್ದರಿಂದ ಅಮರೇಶ್ವರ ನಾಯ್ಕ್ ಅವರಿಗೆ ಕೆಲ ಸಮಸ್ಯೆ ಎದುರಾಗಲಿದೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಬಿಜೆಪಿ ಮುಖಂಡರು ಬಿವಿ ನಾಯ್ಕ್ ಅವರನ್ನು ಸಮಾಧಾನಪಡಿಸಿ ಅಮರೇಶ್ವರ ನಾಯ್ಕ ಪರ ಕೆಲಸ ಮಾಡುವಂತೆ ತಿಳಿಸಿದ್ದಾರೆ.

1971 ರಿಂದ 2019 ರವರೆಗೆ ಕ್ಷೇತ್ರವು 13 ಲೋಕಸಭಾ ಚುನಾವಣೆಗಳನ್ನು ಕಂಡಿದೆ. ಕ್ಷೇತ್ರದಿಂದ ಲೋಕಸಭೆಗೆ 10 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು, ಬಿಜೆಪಿ ಅಭ್ಯರ್ಥಿಗಳನ್ನು ಎರಡು ಬಾರಿ ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಒಂದು ಬಾರಿ (1996 ರಲ್ಲಿ ರಾಜಾ ರಂಗಪ್ಪ ನಾಯ್ಕ್) ಆಯ್ಕೆ ಮಾಡಿ ಕಳುಹಿಸಲಾಗಿದೆ. ಎ ವೆಂಕಟೇಶ್ ನಾಯ್ಕ್ ನಾಲ್ಕು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಬಿಜೆಪಿ ಅಭ್ಯರ್ಥಿ ಬಿವಿ ದೇಸಾಯಿ ಎರಡು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಕ್ಷೇತ್ರವು ಶೋರಾಪುರ, ಶಹಾಪುರ, ಯಾದಗಿರಿ (ಯಾದಗಿರಿ ಜಿಲ್ಲೆಯ), ರಾಯಚೂರು (ಗ್ರಾಮೀಣ), ರಾಯಚೂರು, ಮಾನ್ವಿ, ದೇವದುರ್ಗ ಮತ್ತು ಲಿಂಗಸುಗೂರು (ರಾಯಚೂರು ಜಿಲ್ಲೆಯ) ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 20,10,103 ಮತದಾರರರಿದ್ದು ಅದರಲ್ಲಿ 10,15,158 ಮಹಿಳೆಯರು, 9,94,646 ಪುರುಷರು ಮತ್ತು 299 ಇತರ ಮತದಾರರಿದ್ದಾರೆ.

ಕುಮಾರ್ ನಾಯಕ್ ಮತ್ತು ರಾಜಾ ಅಮರೇಶ್ವರ ನಾಯ್ಕ್
ರಾಯಚೂರು ಬಿಜೆಪಿ ಅಭ್ಯರ್ಥಿಗೆ ಸಂಕಷ್ಟ: ರಾಜಾ ಅಮರೇಶ್ವರ ನಾಯಕ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ!

ಶೋರಾಪುರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರೇ ಹೆಚ್ಚು. ಶೋರಾಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 2,83,083 ಮತದಾರರಿದ್ದರೆ, ರಾಯಚೂರು ಗ್ರಾಮಾಂತರದಲ್ಲಿ ಕನಿಷ್ಠ (2,36,229) ಮತದಾರರಿದ್ದಾರೆ. ಎರಡು ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿದ್ದರೂ ರಾಯಚೂರು ಜಿಲ್ಲೆ ವಿದ್ಯುತ್ ಕಡಿತಕ್ಕೆ ಒಳಗಾಗಿದೆ. ನೂರಾರು ಟನ್‌ಗಳಷ್ಟು ಹಳದಿ ಲೋಹವನ್ನು ಉತ್ಪಾದಿಸುವ ಪ್ರಸಿದ್ಧ ಹಟ್ಟಿ ಚಿನ್ನದ ಗಣಿಗಳನ್ನು ಹೊಂದಿದ್ದರೂ, ಜಿಲ್ಲೆಯು ಅಭಿವೃದ್ಧಿಯ ಹೊಳಪನ್ನು ಕಂಡಿಲ್ಲ. ತುಂಗಭದ್ರಾ ಮತ್ತು ಕೃಷ್ಣಾ ಯೋಜನೆಗಳಿಂದ ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿದ್ದು, ಜಿಲ್ಲೆಯಲ್ಲಿ ಅಪೌಷ್ಟಿಕತೆ ಹೆಚ್ಚಿದೆ.

ಅಂತರ್ಜಲ ಎಷ್ಟು ಶೋಷಣೆಗೆ ಒಳಗಾಗಿದೆ ಎಂದರೆ ಸಾವಿರಾರು ಹೆಕ್ಟೇರ್ ಭೂಮಿ ಉಪ್ಪುನೀರಾಗಿದೆ. ಹೂಳು ತುಂಬಿದ್ದರಿಂದ ತುಂಗಭದ್ರಾ ಜಲಾಶಯದ ಸಾಮರ್ಥ್ಯ ಶೇ.30ರಷ್ಟು ಕಡಿಮೆಯಾಗಿದೆ. ಹತ್ತಾರು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳು ಕುಡಿಯುವ ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ರಾಯಚೂರು ಲೋಕಸಭಾ ಕ್ಷೇತ್ರದ (ಎಸ್‌ಟಿ) ಸಮಸ್ಯೆಗಳ ಪಟ್ಟಿ ದೊಡ್ಡದಾಗಿದೆ, ಆದರೆ ಇನ್ನು ಏಳು ದಿನಗಳ ನಂತರ ಚುನಾವಣೆ ನಡೆಯಲಿರುವ ಕಾರಣ ಅವುಗಳಲ್ಲಿ ಯಾವುದೂ ರಾಜಕೀಯ ಅಜೆಂಡಾದಲ್ಲಿಲ್ಲ ಎಂದು ಜನರು ದೂರುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com