ಹಿಂದೂಗಳಿಗೆ ರಾಮ ಒಬ್ಬನೇ ದೇವರಾ?: ಸಚಿವ ಆರ್.ಬಿ. ತಿಮ್ಮಾಪುರ

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿದಿರುವ ಕಾಂಗ್ರೆಸ್, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಎಂದು ಶನಿವಾರ ಪ್ರಶ್ನಿಸಿದೆ.
ಸಚಿವ ಆರ್.ಬಿ. ತಿಮ್ಮಾಪುರ
ಸಚಿವ ಆರ್.ಬಿ. ತಿಮ್ಮಾಪುರ
Updated on

ಹುಬ್ಬಳ್ಳಿ: ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿದಿರುವ ಕಾಂಗ್ರೆಸ್, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಎಂದು ಶನಿವಾರ ಪ್ರಶ್ನಿಸಿದೆ.

ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್.ಬಿ. ತಿಮ್ಮಾಪುರ ಅವರು, ಹಿಂದೂಗಳಿಗೆ ರಾಮ ಒಬ್ಬನೇ ದೇವರಾ? ರಾಮ ಮಂದಿರಕ್ಕೆ ಹೋದರಷ್ಟೇ ಹಿಂದೂಗಳಾ? ಕಾಳವ್ವ, ಹನುಮಂತ, ದುರ್ಗವ್ವ ದೇವರಲ್ವಾ? ಎಂದು ಪ್ರಶ್ನಿಸಿದರು.

ಹಳ್ಳಿಯಲ್ಲಿರುವ ದೇವರು ಬಿಜೆಪಿಯವರಿಗೆ ಕಾಣಿಸುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಮನ ಹೆಸರಿನಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ ಎಂದರು.

ಬಿಜೆಪಿಯವರಿಗೆ ನರೇಂದ್ರ ಮೋದಿ ಅವರೇ ದೇವರು. ಅವರಿಗೆ ಹಳ್ಳಿಗಳಲ್ಲಿರುವ ದೇವರು ಕಾಣಿಸುವುದಿಲ್ಲ ಎಂದು ಆರ್.ಬಿ. ತಿಮ್ಮಾಪುರ ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com