'ಅವರ ಮತ್ತು ಮೋದಿ ನಡುವೆ ಏನಾಯಿತು ಅಂತ ಗೊತ್ತಿಲ್ಲ': ಧನಕರ್ ರಾಜೀನಾಮೆ ಬಗ್ಗೆ ಖರ್ಗೆ

ಅವರಿಬ್ಬರ ನಡುವೆ ನಿಜವಾಗಿಯೂ ಏನಾಯಿತು ಎಂಬುದನ್ನು ಧನಕರ್ ಹೇಳಬೇಕು ಎಂದು ಖರ್ಗೆ ತಿಳಿಸಿದರು.
Mallikarjun Kharge
ಮಲ್ಲಿಕಾರ್ಜುನ ಖರ್ಗೆ
Updated on

ವಿಜಯಪುರ: ಜಗದೀಪ್ ಧನಕರ್ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಲು ನಿಜವಾದ ಕಾರಣವೇನೆಂದು ತಮಗೆ ಗೊತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.

ಧನಕರ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಈ ವಿಷಯವು ಅವರ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನದ್ದಾಗಿರುವುದರಿಂದ. ಅವರಿಬ್ಬರ ನಡುವೆ ನಿಜವಾಗಿಯೂ ಏನಾಯಿತು ಎಂಬುದನ್ನು ಧನಕರ್ ಹೇಳಬೇಕು ಎಂದು ಖರ್ಗೆ ತಿಳಿಸಿದರು.

ಧನಕರ್ ಯಾವಾಗಲೂ ಸರ್ಕಾರದ ಪರವಾಗಿರುತ್ತಿದ್ದರು ಎಂದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ರೈತರು ಅಥವಾ ಬಡವರ ಪರವಾಗಿ ಅಥವಾ ವಿದೇಶಾಂಗ ನೀತಿಯ ವಿಷಯಗಳ ಬಗ್ಗೆಯೂ ವಿರೋಧ ಪಕ್ಷ ಸಮಸ್ಯೆಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದಾಗಲೆಲ್ಲಾ ಅವರು ಅದಕ್ಕೆ ಯಾವತ್ತೂ ಅನುಮತಿಸಲಿಲ್ಲ ಎಂದರು.

Mallikarjun Kharge
'ಏನೋ ಅನುಮಾನಾಸ್ಪದವಾಗಿದೆ': ಜಗದೀಪ್ ಧನಕರ್ ರಾಜೀನಾಮೆಗೆ ಸರ್ಕಾರ ಸ್ಪಷ್ಟನೆ ನೀಡಬೇಕು; ಮಲ್ಲಿಕಾರ್ಜುನ ಖರ್ಗೆ; Video

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, "ರೈತರು, ಬಡವರು, ಅಂತರರಾಷ್ಟ್ರೀಯ ಸಮಸ್ಯೆಗಳು ಅಥವಾ ವಿದೇಶಾಂಗ ನೀತಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ನಾವು ಎತ್ತಿದಾಗ, ಅವರು ನಮಗೆ(ರಾಜ್ಯಸಭೆಯಲ್ಲಿ ಅದರ ಅಧ್ಯಕ್ಷರಾಗಿ) ಎಂದಿಗೂ ಅವಕಾಶ ನೀಡುತ್ತಿರಲಿಲ್ಲ" ಎಂದರು.

ಕಳೆದ ಜುಲೈ 21 ರಂದು ಸಂಜೆ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದರು. ಇದು ರಾಜಕೀಯ ವಲಯಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಯಿತು.

ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, "ಅದೆಲ್ಲವನ್ನೂ ಈಗ ಹೇಳಲಾಗುವುದಿಲ್ಲ. ನಂತರ ಮಾತನಾಡುತ್ತೇನೆ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com