ಹೊಸ ಜಾತಿ ಗಣತಿ ಸಮೀಕ್ಷೆ ಕೈಬಿಡಿ: ಕಾಂಗ್ರೆಸ್ ಸರ್ಕಾರಕ್ಕೆ ಲಹರ್ ಸಿಂಗ್ ಸಿರೋಯಾ ಒತ್ತಾಯ

ಸುಮಾರು 200 ಕೋಟಿ ರೂ. ಖರ್ಚು ಮಾಡಿ 10 ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯನ್ನು ಕೈಬಿಟ್ಟ ನಂತರ, ಆಡಳಿತಾರೂಢ ಕಾಂಗ್ರೆಸ್ ಹೊಸ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.
 Lahar Singh Siroya
ಲಹರ್ ಸಿಂಗ್ ಸಿರೋಯಾ
Updated on

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ಜಾತಿ ಸಮೀಕ್ಷೆ ನಡೆಸುವ ಯೋಜನೆಯನ್ನು ಕೈಬಿಟ್ಟು ಕೇಂದ್ರ ಸರ್ಕಾರದ ಜನಗಣತಿ ದತ್ತಾಂಶಕ್ಕಾಗಿ ಕಾಯಬೇಕು ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.

ಸುಮಾರು 200 ಕೋಟಿ ರೂ. ಖರ್ಚು ಮಾಡಿ 10 ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯನ್ನು ಕೈಬಿಟ್ಟ ನಂತರ, ಆಡಳಿತಾರೂಢ ಕಾಂಗ್ರೆಸ್ ಹೊಸ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಹಣವನ್ನು ವ್ಯರ್ಥ ಮಾಡುವುದರ ಜೊತೆಗೆ, ಹೊಸ ಸಮೀಕ್ಷೆಯು ಅವ್ಯವಸ್ಥೆಗೆ ಕಾರಣವಾಗುತ್ತದೆ. ಎರಡು ದತ್ತಾಂಶಗಳಿರುತ್ತವೆ. ಒಂದು ಹಳೆಯದು, ಇನ್ನೊಂದು ಹೊಸ ಸಮೀಕ್ಷೆ. ಇವೆರಡನ್ನು ಜನರು ಹೋಲಿಕೆ ಮಾಡಿದ ನಂತರ ಆಕ್ಷೇಪಣೆಗಳನ್ನು ಎತ್ತಬಹುದು. ಪ್ರತಿಯೊಂದು ಸಮುದಾಯವು ತನಗೆ ಸೂಕ್ತವಾದ ಸಮೀಕ್ಷೆಯನ್ನು ಆಯ್ಕೆ ಮಾಡುತ್ತದೆ. ಹೀಗಾಗಿ, ಸಮೀಕ್ಷೆಯ ಉದ್ದೇಶವೇ ಕಳೆದುಹೋಗುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರವು ತನ್ನ ಜನಗಣತಿ ದತ್ತಾಂಶವನ್ನು ಬಿಡುಗಡೆ ಮಾಡುತ್ತದೆ. ಮೂರೂ ಸಮೀಕ್ಷೆಗಳು ವಿಭಿನ್ನ ಮಾಹಿತಿ ಹೊಂದಿರುತ್ತವೆ. ರಾಜ್ಯ ಸರ್ಕಾರವು ತನ್ನ ಹೊಸ ಸಮೀಕ್ಷಾ ಯೋಜನೆಯನ್ನು ಕೈಬಿಡುವ ಮೂಲಕ ಮಾತ್ರ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಬಹುದು ಎಂದು ಸಿರೋಯಾ ಹೇಳಿದರು.

 Lahar Singh Siroya
ಜಾತಿ ಗಣತಿ ಮರು ಸಮೀಕ್ಷೆ ಬದಲು ಕನ್ನಡ ಭಾಷಿಕರ ಸಮೀಕ್ಷೆ ನಡೆಸಿ: ಸರ್ಕಾರಕ್ಕೆ ವಾಟಾಳ್ ನಾಗರಾಜ್ ಆಗ್ರಹ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com