'ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಾಗಲ್ಲ': ಶೋಭಾ ಕರಂದ್ಲಾಜೆ

ಈ ಮಧ್ಯೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅಷ್ಟು ಬೇಗ ಕುರ್ಚಿ ಬಿಟ್ಟುಕೊಡುವವರಲ್ಲ, ಸಿದ್ದರಾಮಯ್ಯ ಹಳೇ ಹುಲಿ, ಯಾವಾಗ, ಯಾವ ಆಟನಾದ್ರೂ ಆಡ್ತಾರೆ ಎಂದರು.
Shobha Karandlaje
ಶೋಭಾ ಕರಂದ್ಲಾಜೆ
Updated on

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ನಿನ್ನೆಯಿಂದ ಮಹತ್ವದ ಬೆಳವಣಿಗಳು ನಡೆದಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಎದ್ದಿದ್ದ ಗೊಂದಲಕ್ಕೆ ಹೈಕಮಾಂಡ್​​ ತೆರೆ ಎಳೆಯುವ ಪ್ರಯತ್ನ ಮಾಡಲಿದ್ದು ನಾಳೆ ಕ್ಲೈಮಾಕ್ಸ್ ಹಂತ ತಲುಪಲಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್​ ಸೂಚಿಸಿದ್ದು ನಾಳೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅಷ್ಟು ಬೇಗ ಕುರ್ಚಿ ಬಿಟ್ಟುಕೊಡುವವರಲ್ಲ, ಸಿದ್ದರಾಮಯ್ಯ ಹಳೇ ಹುಲಿ, ಯಾವಾಗ, ಯಾವ ಆಟನಾದ್ರೂ ಆಡ್ತಾರೆ ಎಂದರು.

Shobha Karandlaje
ಪಟ್ಟದಾಟಕ್ಕೆ ಕೊನೆಗೂ ತೆರೆ: ಮೇ 28 ರಂದು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಅಂದೇ ರಾಜೀನಾಮೆ? Video

'ಹಳೇ ಹುಲಿ ಸಿದ್ದರಾಮಯ್ಯ'

ಸಿದ್ದರಾಮಯ್ಯ ರಾಜಿನಾಮೆ ನೀಡುವ ವಿಚಾರದ ಬಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಹಳೇ ಹುಲಿ, ಯಾವಾಗ ಯಾವ ಆಟ ಆಡ್ತಾರೋ ಗೊತ್ತಾಗಲ್ಲ. ಅವ್ರು ರಾಜೀನಾಮೇ ಕೊಡೋವರೆಗೂ ರಾಜೀನಾಮೇ ಕೊಡ್ತಾರೆ ಅನ್ನೋ ಗ್ಯಾರಂಟಿ ಇಲ್ಲ ಎಂದಿದ್ದಾರೆ.

'ಜನರ ಕೆಲಸ ಮರೆತ ಸರ್ಕಾರ'

ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ ಹೀಗಾಗಿ ಬಿಜೆಪಿ ಅದರ ಬಗ್ಗೆ ಮಾತಾಡೋದು ಏನಿಲ್ಲ, ಇವತ್ತು ರಾಜ್ಯದ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಕಷ್ಟದಲ್ಲಿದ್ದಾರೆ, ಆದರೆ ಆಳುವ ನಾಯಕರು ಕುರ್ಚಿಗಾಗಿ ಹೊಡೆದಾಡುತ್ತಿದ್ದಾರೆ, ನಾವು ಹೇಳೋದು ಇಷ್ಟೇ ಜನರ ಕೆಲಸ ಮಾಡೋಕೆ ಅಂತ 136 ಸೀಟು ಕೊಟ್ಟಿದ್ದಾರೆ. ಜನರ ಕೆಲಸ ಮಾಡಿ ಅಷ್ಟೆ. ಜನರ ಕೆಲಸ ಮರೆತು ಕೇವಲ ಖುರ್ಚಿಗಾಗಿ ಜಗಳ ಆಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

'ಸಿಎಂ, ಸಚಿವ ಸ್ಥಾನಕ್ಕೆ ಕಚ್ಚಾಟ ಬೇಡ'

ಕಾಂಗ್ರೆಸ್​​ನಲ್ಲಿ ಯಾರು ಸಿಎಂ ಆಗಬೇಕು, ಯಾರು ಸಚಿವ ಆಗ್ಬೇಕು ಅಂತ ಕಾದಾಟ ಮಾಡ್ತಿದ್ದಾರೆ. ಇದನ್ನ ಬಿಟ್ಬಿಡಿ ಜನರ ನೋವನ್ನ ಆಲಿಸಿ ಎಂದು ಆಗ್ರಹ ಮಾಡುತ್ತೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com