ಇಸ್ರೊ ಅಧ್ಯಕ್ಷ ಕಿರಣ್ ಕುಮಾರ್
ಇಸ್ರೊ ಅಧ್ಯಕ್ಷ ಕಿರಣ್ ಕುಮಾರ್

ಮುಂದಿನ ವರ್ಷ ಜಿಸ್ಯಾಟ್ 15 ಉಡಾವಣೆ: ಕಿರಣ್ ಕುಮಾರ್

ವಿಮಾನ ಹಾರಾಟ ಹಾಗೂ ಜೀವರಕ್ಷಕ ಉದ್ದೇಶಗಳ ಮಾಹಿತಿ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ಐಆರ್‍ಎನ್ ಎಸ್‍ಎಸ್...
ಬೆಂಗಳೂರು: ವಿಮಾನ ಹಾರಾಟ ಹಾಗೂ ಜೀವರಕ್ಷಕ ಉದ್ದೇಶಗಳ ಮಾಹಿತಿ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸುವ ಐಆರ್‍ಎನ್ ಎಸ್‍ಎಸ್ (ಇಂಡಿಯನ್ ರೀಸನಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ-ಭಾರತೀಯ ಪ್ರಾದೇಶಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ) ಭಾರತೀಯ ವೈಮಾನಿಕ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿಸಲಿದೆ ಎಂದು ಇಸ್ರೊ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ. 
ಇಸ್ರೊ ಸಂಸ್ಥೆಯಲ್ಲಿ ಗುರುವಾರ ನಡೆದ ಜಿಎನ್‍ಎಸ್‍ಎಸ್ (ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಂ - ಜಾಗತಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ) ಬಳಕೆದಾರರ ಸಮಾವೇಶ- 2015ನ್ನು ಉದ್ದೇಶಿಸಿ ಮಾತನಾಡಿದ ಅವರು, ದಿಶಾದರ್ಶನಕ್ಕೆ ಇಂಬು ಕೊಡುವ ಒಟ್ಟು ಏಳು ಉಪಗ್ರಹಗಳ ಈ ಜಾಲಕ್ಕೆ ಇನ್ನೆರಡು ಉಪಗ್ರಹಗಳು ಸೇರ್ಪಡೆಯಾಗುವುದು ಬಾಕಿ ಇದ್ದು ಜಿಸ್ಯಾಟ್-15 ಮಾರ್ಚ್ 2016ಕ್ಕೆ ಉಡಾವಣೆಯಾದಾಗ ಗಗನ್ (ನಾಗರಿಕ ವಿಮಾನಯಾನ ಮತ್ತು ಜೀವರಕ್ಷಕ ಸೌಲಭ್ಯಗಳ ವ್ಯವಸ್ಥೆ) ಸಂಪೂರ್ಣವಾಗಲಿದೆ. ಇದರಿಂದ ನಮ್ಮ ಮಾನಗಳ ಹಾರಾಟ, ಜೀವರಕ್ಷಕ ಸೌಲಭ್ಯಗಳು ಇನ್ನಷ್ಟು ಕರಾರುವಾಕ್ಕಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡಲಿವೆ ಎಂದರು. 
ನಭದಲ್ಲಿ ಉಪಗ್ರಹ ಜಾಲ:  ಆರ್‍ಎನ್ ಎಸ್‍ಎಸ್ (ಇಂಡಿಯನ್ ರೀಸನಲ್ ನ್ಯಾವಿ- ಗೇಶನ್ ಸ್ಯಾಟಲೈಟ್ ಸಿಸ್ಟಂ-ಭಾರತೀಯ ಪ್ರಾದೇಶಿಕ ದಿಶಾದರ್ಶನ ಉಪಗ್ರಹ ವ್ಯವಸ್ಥೆ) ಒಟ್ಟು ಏಳು ಉಪಗ್ರಹಗಳನ್ನು ಒಳಗೊಳ್ಳಲಿದ್ದು, ಅಂತಾರಾಷ್ಟ್ರೀಯ ಮಾನದಂಡ ಮತ್ತು ಗುಣಮಟ್ಟದ ಸೇವೆಯನ್ನು ಒದಗಿಸಲಿದೆ. ಐಆರ್‍ಎನ್‍ಎಸ್‍ಎಸ್ ವ್ಯವಸ್ಥೆಯಿಂದ ಜಗತ್ತಿನ ಮುಂದುವರಿದ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದ್ದು, ತನ್ನ ಉಪಗ್ರಹಗಳ ನಿಖರ ಮಾಹಿತಿ ವ್ಯವಸ್ಥೆಯಿಂದಾಗಿ ಎಪಿವಿ 1.0 ಪ್ರಮಾಣಪತ್ರವನ್ನೂ ಪಡೆದಿದೆ ಎಂದರು. 
ಈ ವ್ಯವಸ್ಥೆ ಮೂಲಕ, ಜಿಪಿಎಸ್ ಸಿಗ್ನಲ್ ಆಧರಿಸಿ ಇಡೀ ದೇಶಾದ್ಯಂತ ಯಾವ ವಾಹನ ಎಲ್ಲಿದೆ ಎಂಬ ನಿಖರ ಮಾಹಿತಿ ಪಡೆಯಲು ಸಾಧ್ಯ. ಇದು ಕೇವಲ ವೈಮಾನಿಕ ಕ್ಷೇತ್ರವಷ್ಟೇ ಅಲ್ಲ, ಟ್ಯಾಕ್ಸಿ, ಬಸ್, ವ್ಯಕ್ತಿ ಸೇರಿದಂತೆ ಜಿಪಿಎಸ್ ಹೊಂದಿರುವ ಪ್ರತಿಯೊಂದು ವಾಹನ, ವ್ಯಕ್ತಿಯ ಭೌಗೋಳಿಕ ಸ್ಥಾನದ ವಿವರವನ್ನು 20 ಮೀಟರ್ ವ್ಯಾಪ್ತಿಯ ನಿಖರತೆಯೊಂದಿಗೆ ನೀಡಲಿದೆ. ಶೈಕ್ಷಣಿಕ, ಕೈಗಾರಿಕೆ ಸೇರಿದಂತೆ ಒಟ್ಟು 28 ಕ್ಷೇತ್ರ ಗಳಲ್ಲಿ ಈ ಮಾಹಿತಿ ಉಪಯುಕ್ತವಾಗಲಿದೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com