ನ್ಯಾಯಾಲಯ ಸಲ್ಮಾನ್ ಖಾನ್ ತಾನು ನಿರ್ದೋಷಿ ಎಂದು ತೀರ್ಪು ನೀಡಿದೆ. 13 ವರ್ಷಗಳಿಂದ ಸಲ್ಮಾನ್ಗೆ ಕಂಟಕವಾಗಿದ್ದ ಗುದ್ದೋಡು ಪ್ರಕರಣದ ತೀರ್ಪನ್ನು ಬಾಂಬೆ ಹೈಕೋರ್ಟ್ ಪ್ರಕಟಿಸಿದ್ದು, ಸಲ್ಲು ಭಾಯಿ ನಿರಾಳವಾಗಿದ್ದಾರೆ. 2002 ರಲ್ಲಿ ನಡೆದ ಸಲ್ಮಾನ್ ಖಾನ್ನ ಗುದ್ದೋಡು ಪ್ರಕರಣದಲ್ಲಿ ಸಲ್ಮಾನ್ ಖಾನ್ನ ಬಾಡಿಗಾರ್ಡ್ ರವೀಂದ್ರ ಪಾಟಿಲ್ರ ಸಾಕ್ಷಿಯನ್ನು ಸಂಪೂರ್ಣವಾಗಿ ಪರಿಗಣಿಸುವಂತಿಲ್ಲ, ಅದರಲ್ಲಿ ಕೆಲವೇ ಕೆಲವು ಹೇಳಿಕೆಗಳನ್ನು ಮಾತ್ರ ಸಾಕ್ಷಿಯಾಗಿ ಪರಿಗಣಿಸಬಹುದೆಂದು ನ್ಯಾಯಾಲಯ ಹೇಳಿತ್ತು. ಹೀಗೆ ರವೀಂದ್ರ ಪಾಟಿಲ್ ಸಾಕ್ಷಿಯನ್ನು ಪರಿಗಣಿಸದೇ ಇರುವ ಕಾರಣ ಸಲ್ಮಾನ್ ಖುಲಾಸೆ ಆಯ್ತು!