ಗೆಲ್ಗೆ" ಓಡಾಡ್ಕೊಂಡು ತಮ್ಮ ದರ್ಪವನ್ನು ತೋರಿಸುತ್ತಾರೆ. ತಮಿಳರ ಅಲಸೂರು, ಹಿಂದಿಯರ ಮಾರತ್ ಹಳ್ಳಿ, ತೆಲಗು ಮಾತಾಡೋ ಕೆ.ಆರ್ ಪುರಂ, ಇಂಗ್ಲಿಷ್ ಮಾತಾಡೋ ಬ್ರಿಗೇಡ್ ರಸ್ತೆ, ಫ್ರೆಂಚ್ ಗೆ ವಸಂತನಗರ, ಜರ್ಮನ್ ಗೆ ಇಂದಿರಾನಗರದ ಮಧ್ಯೆ ನಮ್ಮ ಕನ್ನಡ ಈ ಬಾರಿಯಾದರೂ ಶಾಶ್ವತವಾಗಿ ಉದ್ಭವವಾಗಿರಲಿ ಅನ್ನೋದೇ ಈ ವರ್ಷದ ರಾಜ್ಯೋತ್ಸವದ ಕನಸು. ಕನ್ನಡ ಬೆಳೆಸುವ ಹಾಗು ಬೆಳವಣಿಗೆಗೆ ಒಂದೇ ದಾರಿ! ನಿತ್ಯ ನಿರಂತರವಾಗಿ ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು ಅಷ್ಟೇ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು..