ಚಿಕ್ಕಮಗಳೂರು: ಬೆಳೆ, ಇಳುವರಿ ಕೈಗೆ ಸಿಗಲು ಸಕಾಲದಲ್ಲಿ ಉತ್ತಮ ಮಳೆಯಾಗಲಿ ಎಂದು ರೈತರು ಆಶಿಸುತ್ತಾರೆ. ಆದರೆ ಈ ಬಾರಿ ಅಕಾಲಿಕ ಮಳೆ ರೈತರು ನಿರೀಕ್ಷೆ ಮಾಡದ ರೀತಿ ಬಂದು ಹೋಗಿದೆ. ಸಾಕಷ್ಟು ಬೆಳೆಹಾನಿಯಾಗಿದೆ. ಆದರೆ ಮಲೆನಾಡಿನ ಈ ಭಾಗದ ಜನರು ಮಳೆನೀರನ್ನು ಚೆನ್ನಾಗಿ ಸಂಗ್ರಹಿಸಿಟ್ಟುಕೊಳ್ಳುವ ಕಲೆ ಕರಗತ ಮಾಡಿಕೊಂಡಿದ್ದಾರೆ.
ಇವರು ಮಲೆನಾಡು ಚಿಕ್ಕಮಗಳೂರಿನ ಸಂಶೋಧಕ, ಮಳೆನೀರು ಕೊಯ್ಲನ್ನು ಯಾವ ರೀತಿ ಸುಡು ಬೇಸಿಗೆಯಲ್ಲಿ ಹೇಗೆ ಬಳಸಿಕೊಳ್ಳಬೇಕೆಂದು ಅವರಿಗೆ ಗೊತ್ತಿದೆ. ಮಳೆಯಿಂದ ಬೆಳೆಹಾನಿಯನ್ನು ಹೇಗೆ ತಡೆಯಬೇಕು ಎಂದು ತಮ್ಮದೇ ವಿಧಾನ ಮೂಲಕ ಕಂಡುಕೊಂಡಿದ್ದಾರೆ ಹಾಡಿಹಳ್ಳಿಯ ಮಳೆನೀರು ಕೊಯ್ಲು ಸಂಶೋಧನಾ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್, ಅದನ್ನು ಅವರು ಆದಿಶಕ್ತಿನಗರದ ಅನುರಾಗ ಫಾರ್ಮ್ ನಲ್ಲಿ ಪ್ರದರ್ಶನ ಮಾಡಿದ್ದಾರೆ. ಇವರ ಫಾರ್ಮ್ ಕಳೆದ ಮಳೆಯಲ್ಲಿ ಜಲಾವೃತವಾಗಿದ್ದರೂ ಬೆಳೆ ಹಾನಿಯಾಗಿದ್ದು ಮಾತ್ರ ಕಡಿಮೆ ಅದಕ್ಕೆ ಕಾರಣ ''ವಿ ವೈರ್ ಇಂಜೆಕ್ಷನ್ ವೆಲ್ ಟೆಕ್ನಾಲಜಿ.''
ಹೆಸರಿಗೆ ತಕ್ಕಂತೆ ಮಲೆನಾಡಿನಲ್ಲಿ ಮಳೆ ಹೆಚ್ಚು. ತಲೆಮಾರುಗಳಿಂದ ಇಲ್ಲಿನ ಜನರು ಮಳೆಗೆ ಒಗ್ಗಿಕೊಂಡಿದ್ದಾರೆ, ಅವರ ಜೀವನಶೈಲಿಯೂ ಹಾಗೆಯೇ, ಈ ವರ್ಷ ಅತ್ಯಧಿಕ ಮಳೆಯಾಗಿದೆ. ಮಲೆನಾಡಿನ ಕಾಫಿ, ಅಡಿಕೆ ಬೆಳೆಗಾರರು ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದಾರೆ. ಜಲಾವೃತಗೊಂಡು ಬಯಲುಸೀಮೆಯಲ್ಲಿ ರಾಗಿ, ಮೆಕ್ಕೆಜೋಳ ಬೆಳೆಗಾರರು ಕೂಡ ಬೆಳೆಗಳು ನೀರಿಗೆ ಕೊಳೆದು ಹೋಗಿ ಸಮಸ್ಯೆ ಅನುಭವಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಬ್ಯಾಪ್ಟಿಸ್ಟ್ ಅವರ ಈ ತಂತ್ರಜ್ಞಾನ ಅನ್ವೇಷಣೆ ವಿಭಿನ್ನವಾಗಿ ಸಹಾಯವಾಗುತ್ತದೆ. ಇತರರು ಮಳೆನೀರನ್ನು ವಿನಾಶಕಾರಿ ಎಂದು ಗ್ರಹಿಸಿದರೆ, ಈ ನಾವೀನ್ಯಕಾರರಿಗೆ, ಇದು ಈ ಎಲ್ಲಾ ಪ್ರಮುಖ ಸಂಪನ್ಮೂಲವನ್ನು ಬಳಸಿಕೊಳ್ಳಲು ಸಮರ್ಥ ಮಾರ್ಗಗಳನ್ನು ಕಂಡುಕೊಳ್ಳುವ ಅವಕಾಶದ ಮಹಾಪೂರವನ್ನು ಹರಿಸಿದೆ.
ಇವರ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?: ಅವರ ವಿ-ವೈರ್ ವೆಲ್ ತಂತ್ರಜ್ಞಾನವು ಬೋರ್ವೆಲ್ಗಳನ್ನು ಮರುಪೂರಣಗೊಳಿಸಲು ಹರಿದು ಹೋಗುವ ಮಳೆನೀರನ್ನು ಬಳಸಿಕೊಳ್ಳುತ್ತದೆ. ಬ್ಯಾಪ್ಟಿಸ್ಟ್ ತನ್ನ ಜಮೀನಿನಲ್ಲಿ 30/60 ಅಡಿ ಅಗಲ ಮತ್ತು 10 ಅಡಿ ಆಳದ ತೊಟ್ಟಿಯನ್ನು ನಿರ್ಮಿಸಿದ್ದಾರೆ, ಇದು ಮಳೆನೀರನ್ನು ಸಂಗ್ರಹಿಸುತ್ತದೆ. ಟ್ಯಾಂಕ್ ಅಂಚಿನಲ್ಲಿ ತುಂಬಿದಾಗ, ಹೆಚ್ಚುವರಿ ನೀರು ಕಾಲುವೆಯ ಉದ್ದಕ್ಕೂ ವಿ-ವೈರ್ ಇಂಜೆಕ್ಷನ್ ವೆಲ್ ಹರಿಯುತ್ತದೆ, ಇದು ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ನೀಗಿಸಲು ಉತ್ತಮ ಬಳಕೆಗೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.
ತಂತ್ರಜ್ಞಾನವು ಸಿಲ್ಟ್ ಟ್ರ್ಯಾಪ್ ಯುನಿಟ್, ರೀಚಾರ್ಜ್ ಪಿಟ್ (ಪುಡಿಮಾಡಿದ ಕಲ್ಲು, ಜಲ್ಲಿ, ಒರಟಾದ ಮರಳು ಮತ್ತು ಸಕ್ರಿಯ ಇದ್ದಿಲು ಒಳಗೊಂಡಿರುತ್ತದೆ. ಉಳಿದ ಜಾಗವನ್ನು ನೀರು ಸಂಗ್ರಹಿಸಲು) ಮತ್ತು ಪಿಟ್ನ ಕೆಳಭಾಗದಲ್ಲಿ ರೀಚಾರ್ಜಿಂಗ್ ಬೋರ್ (45-100 ಮೀಟರ್) ಒಳಗೊಂಡಿರುತ್ತದೆ. ಮಳೆನೀರನ್ನು ಕಾಲುವೆ ಮೂಲಕ ಮೊದಲ ರೀಚಾರ್ಜ್ ಸಿಲ್ಟ್ ಟ್ರ್ಯಾಪ್ಗೆ ಕಳುಹಿಸಲಾಗುತ್ತದೆ. ಉಕ್ಕಿ ಹರಿಯುವ ನೀರನ್ನು ನಂತರ ಇಂಜೆಕ್ಷನ್ ಬಾವಿಗೆ ವರ್ಗಾಯಿಸಲಾಗುತ್ತದೆ. V-ವೈರ್ ಪರದೆಗೆ ಜೋಡಿಸಲಾದ ಪರ್ಕೊಲೇಟರ್ ಪೈಪ್ ಪ್ರವೇಶ ಸಾಧ್ಯವಾದ ಸ್ತರಗಳ ಮೂಲಕ ಹಾದುಹೋಗಿ ಅಂತರ್ಜಲವನ್ನು ಹೆಚ್ಚಿಸುತ್ತದೆ.
ಪ್ರವಾಹ ರೀತಿಯಲ್ಲಿ ಮಳೆ ಬಂದಾಗ ಸಾಕಷ್ಟು ಹಾನಿಯನ್ನುಂಟುಮಾಡುತ್ತಿರುವ ಸಮಯದಲ್ಲಿ, ಜಾಗತಿಕ ತಾಪಮಾನದ ಅನಿಶ್ಚಿತತೆಯ ಜೊತೆಗೆ, ಬೋರ್ವೆಲ್ಗಳನ್ನು ಮರುಪೂರಣ ಮಾಡುವ ಮೂಲಕ ಬೇಸಿಗೆಯಲ್ಲೂ ಮಳೆನೀರನ್ನು ನೈಸರ್ಗಿಕ ಪೋಷಣೆಯ ಮೂಲವಾಗಿ ಬಳಸಬಹುದು.
ಈ ಕಡಿಮೆ ವೆಚ್ಚದ ತಂತ್ರಜ್ಞಾನವು ಬಯಲು ಸೀಮೆಯ ಅನೇಕ ರೈತರಿಗೆ ವಿಶೇಷವಾಗಿ ಬರಗಾಲದ ಸಮಯದಲ್ಲಿ ಮಳೆನೀರನ್ನು ಕೊಯ್ಲು ಮಾಡಲು ಸಹಾಯ ಮಾಡಿದೆ. ಈ ಯಶಸ್ವಿ ವ್ಯವಸ್ಥೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪುನರಾವರ್ತನೆಯಾಗುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಹಲವು ಪಂಚಾಯತ್ಗಳು ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ ಎಂದು ಬ್ಯಾಪ್ಟಿಸ್ಟ್ ಹೇಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ತಂತ್ರಜ್ಞಾನವನ್ನು ಬಳಸಲು ಶಿಫಾರಸು ಮಾಡಿದೆ ಎನ್ನುತ್ತಾರೆ.
ವಿದ್ಯಾರ್ಥಿ ಸಂಶೋಧಕ: ಚಿಕ್ಕಮಗಳೂರು ಹೊರವಲಯದ ಆದಿಶಕ್ತಿನಗರದ ನಿವಾಸಿ ಮೈಕಲ್ ಸದಾನಂದ ಬ್ಯಾಪ್ಟಿಸ್ಟ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಓದಿದ್ದಾರೆ. ಕಿರ್ಲೋಸ್ಕರ್ ಸೋಲಾರ್ ಪವರ್ ಪ್ಲಾಂಟ್ ಮತ್ತು ಜಿಂದಾಲ್ ಗುಂಪಿನೊಂದಿಗೆ ಸಹಭಾಗಿತ್ವ ಮೂಲಕ ಈ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.
ವರ್ಷಗಳ ಹಿಂದೆ ಆದಿಶಕ್ತಿನಗರದಲ್ಲಿ ನೀರಿನ ಕೊರತೆಯಿದ್ದ ಸಂದರ್ಭದಲ್ಲಿ ಬ್ಯಾಪ್ಟಿಸ್ಟ್ನ ತಂದೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದ್ದರು. ಕೊಳವೆ ಬಾವಿಗಳಲ್ಲಿ ನೀರು ಮರುಸಂಗ್ರಹಕ್ಕೆ ಮಳೆನೀರನ್ನು ಕೊಯ್ಲು ಮಾಡಲು ಮುಂದಾದರು. ಇದೀಗ ಹಾಡಿಹಳ್ಳಿಯಲ್ಲಿ ಮಳೆ ನೀರು ಕೊಯ್ಲು ಸಂಶೋಧನಾ ಕೇಂದ್ರ ಆರಂಭಿಸಿದ್ದು, ಇಂದು ರೈತರಿಗೆ ನೆರವಾಗುತ್ತಿದೆ.
Advertisement