ಅರ್ಜುನ ಪ್ರಶಸ್ತಿಗೆ ಸೌರವ್ ಮನವಿ

ದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಅರ್ಜುನ ಪ್ರಶಸ್ತಿಗೆ ಪ್ರಶಸ್ತಿ ಸಮಿತಿ ತಮ್ಮ ಹೆಸರನ್ನು ತಿರಸ್ಕರಿಸಿರುವುದರಿಂದ ತೀವ್ರ...
ಸೌರವ್ ಕೊಠಾರಿ
ಸೌರವ್ ಕೊಠಾರಿ
Updated on

ಕೋಲ್ಕತಾ: ದೇಶದ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ ಒಂದಾಗಿರುವ ಅರ್ಜುನ ಪ್ರಶಸ್ತಿಗೆ ಪ್ರಶಸ್ತಿ ಸಮಿತಿ ತಮ್ಮ ಹೆಸರನ್ನು ತಿರಸ್ಕರಿಸಿರುವುದರಿಂದ ತೀವ್ರ ಬೇಸರಗೊಂಡಿರುವ ಖ್ಯಾತ ಸ್ನೂಕರ್ ಆಟಗಾರ ಸೌರವ್ ಕೊಠಾರಿ, ಪ್ರಶಸ್ತಿಗೆ ತಮ್ಮ ಹೆಸರನ್ನು ಸೇರಿಸುವಂತೆ ಕ್ರೀಡಾ ಸಚಿವ ಸರ್ಬಾನಂದ ಸೊನೊವಾಲ್ ಅವರಿಗೆ ಮನವಿ ಮಾಡಿದ್ದಾರೆ.

``ಅರ್ಜುನ ಪ್ರಶಸ್ತಿಗಾಗಿ ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ್ದರೂ, ಕೊನೇ ಕ್ಷಣದಲ್ಲಿ ಕೈಬಿಟ್ಟಿರುವುದರಿಂದ ನಿರಾಸೆ ತರಿಸಿದೆ.

ಹೀಗಾಗಿ ಕ್ರೀಡಾಸಚಿವಾಲಯ ಪಟ್ಟಿಯನ್ನು ಪುನರ್ ಪರಿಶೀಲಿಸಬೇಕು ಎಂದು ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ ಕೊಠಾರಿ ತಿಳಿಸಿರುವುದಾಗಿ ಸಿಎನ್ ಎನ್ ಐಬಿಎನ್ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com