ಕ್ರೀಡಾಳು ಸಾವು: ಸಂಸತ್ ನಲ್ಲಿ ಪ್ರತಿಧ್ವನಿ

ಕೇರಳದ ಅಲೆಪ್ಪಿಯ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ತರಬೇತಿ ಕೇಂದ್ರದಲ್ಲಿ ಮಹಿಳಾ ಯುವ ಕ್ರೀಡಾಳು ಆತ್ಮಹತ್ಯೆ ಮಾಡಿಕೊಂಡ
ಸಂಸತ್
ಸಂಸತ್
Updated on

ನವದೆಹಲಿ: ಕೇರಳದ ಅಲೆಪ್ಪಿಯ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ (ಸಾಯ್)ದ ತರಬೇತಿ ಕೇಂದ್ರದಲ್ಲಿ ಮಹಿಳಾ ಯುವ ಕ್ರೀಡಾಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಸತ್ ನಲ್ಲಿ ಪ್ರತಿಧ್ವನಿಸಿತು.
ಸಾಯ್ ನ ಮಹಾ ನಿರ್ದೇಶಕರನ್ನು  ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ತರಬೇತಿ ಕೇಂದ್ರಗಳಲ್ಲಿ ಮಹಿಳಾ ಸುರಕ್ಷತೆಗೆ ಅನುಕೂಲವಾಹುವಂತ ಕಠಿಣ ಕಾನೂನನ್ನು ಜಾರಿಗೊಳಿಸಬೇಕೆಂದು ಸಂಸದರು ಸರ್ಕಾರವನ್ನು ಒತ್ತಾಯಿಸಿದರು.
ಲೋಕಸಭೆಯಲ್ಲಿ ಈ ಬಗ್ಗೆ ದನಿ ಎತ್ತಿದ ಬಿಜೆಪಿಯ ಪ್ರಹ್ಲಾದ್ ಪಟೇಲ್ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ಇರುವ ಸರ್ವಾಧಿಕಾರಿ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕು. ಹಾಗೂ ವಿದ್ಯಾರ್ಥಿಗಳು ನಿರುಮ್ಮಳವಾಗಿ ತರಬೇತಿ ಪಡೆಯುವಂತೆ ಕಾನೂನು ರೂಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನ ಪ್ರಮೋದ್ ತಿವಾರಿ, ರಾಜೀವ್ ಶುಕ್ಲಾ, ಮಾಜಿ ಕೇಂದ್ರ ಸಚಿವ ಎ.ಕೆ ಆ್ಯಂಟನಿ ಇದಕ್ಕೆ ದನಿಗೂಡಿಸಿದರು.
ಬುಧವಾರ ಅಲೆಪ್ಪಿಯ ಸಾಯ್ ಕೇಂದ್ರದಲ್ಲಿ ನಾಲ್ವರು ಬಾಲಕಿಯರು ಆತ್ಮಹತ್ಯೆಗೆ ಯತ್ನಿಸಿದ್ದರು. ಇವರಲ್ಲಿ ಅಪರ್ಣಾ ಎಂಬ ಅಥ್ಲೀಟ್ ಸಾವನ್ನಪ್ಪಿದ್ದಳು.
ಚೇತರಿಕೆ: ಇತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಮೂವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
5 ಲಕ್ಷ ಪರಿಹಾರ: ಅಲೆಪ್ಪಿಯ ಸಾಯ್ ಕೇಂದ್ರದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡ ಯುವ ಕ್ರೀಡಾಳು ಕುಟುಂಬಕ್ಕೆ ಸಾಯ್ ವತಿಯಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಶುಕ್ರವಾರ ಅಪರ್ಣಾ ಮನೆಗೆ ಭೇಟಿ ನೀಡಿದ ಸಾಯ್ ನಿರ್ದೇಶಕ ಇಂಜೆಟಿಶ್ರೀನಿವಾಸ್ ಕುಟುಂಬ ಸದಸ್ಯರಿಗೆ ಪರಿಹಾರದ ಚೆಕ್ ವಿತರಿಸಿದರು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com