ಭಾರತ-ಪಾಕ್ ಸರಣಿ ರದ್ದು: ಜೇಟ್ಲಿ ಭೇಟಿಗೆ ಶಹರ್ಯಾರ್ ಖಾನ್ ಯತ್ನ

ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತದ ಜತೆಗಿನ ಕ್ರಿಕೆಟ್ ಸರಣಿ ಸಾಕಾರಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ...
ಶಹರ್ಯಾರ್ ಖಾನ್
ಶಹರ್ಯಾರ್ ಖಾನ್
Updated on
ನವದೆಹಲಿ: ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಭಾರತದ ಜತೆಗಿನ ಕ್ರಿಕೆಟ್ ಸರಣಿ ಸಾಕಾರಗೊಳ್ಳುವ ಸಾಧ್ಯತೆಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಶಹರ್ಯಾರ್‌ ಖಾನ್ ಹೇಳಿದ್ದಾರೆ. 
ಪಿಸಿಬಿ ಕಾರ್ಯಕಾರಿ ಸಮಿತಿ ಮುಖ್ಯಸ್ಥ ನಜಮ್ ಸೇಥಿ ಅವರು ದುಬೈಗೆ ತೆರಳಿದ್ದಾರೆ. ನಾನು ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಚರ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಭೇಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಖಾನ್ ಹೇಳಿದ್ದಾರೆ.
ಭಾರತದ ಜತೆಗಿನ ಕ್ರಿಕೆಟ್ ಸರಣಿಯ ಸಾಧ್ಯತೆಗಳ ಬಗೆಗಿನ ಪ್ರಶ್ನೆಗೆ ಏನಾದರೂ ಮಾತುಕತೆ ನಡೆದ ಬಳಿಕವಷ್ಟೇ ನಾನು ಹೇಳಬಲ್ಲೇ ಎಂದಿದ್ದಾರೆ. ಮತ್ತೊಂದೆಡೆ, ಯಾವುದೇ ಅಧಿಕೃತ ಅಥವಾ ಅನಧಿಕೃತ ಮಾತುಕತೆ ನಡೆದಲ್ಲಿ ಇಂದು ಸಂಜೆಯೇ ನಡೆಯಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com