ಅಖಿಲ್ ಆಸರೆ: ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್, ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ. ಆರ್. ಸಮರ್ಥ್ (17), ರಾಜು ಭಟ್ಕಳ್ (21), ರಾಬಿನ್ ಉತ್ತಪ್ಪ (9), ದೀಪಕ್ (5), ಸುನೀಲ್ ರಾಜು (6) ಹಾಗೂ ಎಂ.ನಿಧೇಶ್ (0) ಬೇಗನೇ ವಿಕೆಟ್ ಒಪ್ಪಿಸಿದರು. ಹಾಗಾಗಿ ತಂಡ ಒತ್ತಡಕ್ಕೆ ಸಿಲುಕಿತು.ಈ ವೇಳೆ ಕಣಕ್ಕಿಳಿದ ನಾಯಕ ಬಾಲಚಂದ್ರ ಅಖಿಲ್ (25) ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು 120ರ ಗಡಿ ದಾಟುವಂತೆ ನೋಡಿಕೊಂಡರು. ಬಳ್ಳಾರಿ ತಂಡದ ಪರ ಪ್ರಸಿದ್ 3, ಪ್ರಸನ್ನ 2, ಕಾರ್ತಿಕ್ ಮತ್ತು ಅಮಿತ್ ತಲಾ 1 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ಬಿಜಾಪುರ ಬುಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಗೆ 125 (ಅಖಿಲ್ 25, ರಾಜು ಭಟ್ಕಳ್ 21, ಪ್ರಸಿದ್ 24ಕ್ಕೆ3, ಪ್ರಸನ್ನ 25ಕ್ಕೆ 2) ಬಳ್ಳಾರಿ ಟಸ್ಕರ್ಸ್ 19.5 ಓವರ್ಗಳಲ್ಲಿ 109 (ಅಮಿತ್ ವರ್ಮಾ 26, ಅನಿರುದ್ಧ 30, ಕಾರ್ಯಪ್ಪ 14ಕ್ಕೆ3, ಅಪ್ಪಣ್ಣ 17ಕ್ಕೆ 3) ಪಂದ್ಯಶ್ರೇಷ್ಠ: ಕೆ.ಸಿ ಕಾರ್ಯಪ್ಪ