ತಂಡದ ಪರ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಸಿ.ಎಂ. ಗೌತಮ್ (30: 33 ಎಸೆತ, 4 ಬೌಂಡರಿ) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಜಗದೀಶ್ ಸುಚಿತ್ (27: 16 ಎಸೆತ, 4 ಬೌಂಡರಿ) ಬಿಟ್ಟರೆ ಮಿಕ್ಕವರು ಸಮರ್ಥ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಕಿಶೋರ್ ಕಾಮತ್ ಕೇವಲ 12 ರನ್ಗಳಿಗೆ 3 ವಿಕೆಟ್ ಪಡೆದು ಮೈಸೂರು ವಾರಿಯರ್ಸ್ಗೆ ಮಾರಕರಾದರೆ, ಸಂತೆಬನ್ನೂರು ಅಕ್ಷಯ್ 12ಕ್ಕೆ 2, ಕ್ರಾಂತಿ ಕುಮಾರ್ 15ಕ್ಕೆ 2 ಮತ್ತು ಪ್ರತೀಕ್ ಜೈನ್ 35ಕ್ಕೆ 1 ವಿಕೆಟ್ ಪಡೆದು ಮೈಸೂರು ವಾರಿಯರ್ಸ್ ಅನ್ನು ಕಟ್ಟಿಹಾಕಿದರು.