''ಕಳೆದ ಒಂದೂವರೆ ತಿಂಗಳಿನಿಂದ ನಮಗೆ ಯಾವುದೇ ಟೂರ್ನಮೆಂಟ್ ಇರಲಿಲ್ಲ. ಒಲಿಂಪಿಕ್ ಗಾಗಿ ನಾನು ಕೆಲವು ತ್ಯಾಗಗಳನ್ನು ಮಾಡಿದ್ದೇನೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ ಸಂಪೂರ್ಣ ಭಿನ್ನ ಟೂರ್ನಮೆಂಟ್ ಆಗಿರುತ್ತದೆ, ನಮ್ಮ ಗುರಿ ಚಿನ್ನದ ಪದಕ ಗೆಲ್ಲುವುದಾಗಿರುತ್ತದೆ. ಇದೊಂದು ಕ್ಲಿಷ್ಟ ಆಟವಾಗಿತ್ತು, ಆದರೆ ನನಗೆ ನನ್ನ ಮೇಲೆ ನಂಬಿಕೆಯಿತ್ತು. ಗೋಪಿ ಸರ್ ಗೆ ನನ್ನ ಮೇಲೆ ನಂಬಿಕೆಯಿತ್ತು. ನಾವು ತುಂಬಾ ಕಠಿಣವಾಗಿ ತರಬೇತಿ ಪಡೆಯುತ್ತಿದ್ದೆ. ಚಿನ್ನ ಗೆಲ್ಲಲು ಸಾಧ್ಯವಾಗದಾಗ ಗೋಪಿ ಸರ್, ಚಿಂತಿಸಬೇಡ, ಒಂದು ಸಲಕ್ಕೆ ಒಂದು ಮ್ಯಾಚ್ ಅಷ್ಟೆ, ಅದೇ ಆಟದ ನಿಯಮ'' ಎಂದರು.