social_icon

ಮೇ 7 ರಂದು ನಿಗದಿಯಾಗಿದ್ದ ಡಬ್ಲ್ಯೂಎಫ್ ಐ ಚುನಾವಣೆಗೆ ತಡೆ, ತಾತ್ಕಾಲಿಕ ಸಮಿತಿ ರಚನೆಗೆ ಐಒಎಗೆ ಕ್ರೀಡಾ ಸಚಿವಾಲಯ ಸೂಚನೆ

ಮೇ 7 ರಂದು ನಿಗದಿಯಾಗಿದ್ದ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಚುನಾವಣೆಗೆ ಕ್ರೀಡಾ ಸಚಿವಾಲಯ ಸೋಮವಾರ ತಡೆ ನೀಡಿದೆ. ಡಬ್ಲ್ಯೂಎಫ್ ಐ ನಿರ್ವಹಿಸಲು ಮತ್ತು ಅದಕ್ಕೆ ರಚನೆಯಾದ 45 ದಿನಗಳಲ್ಲಿ ಚುನಾವಣೆ ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಸೂಚಿಸಿದೆ. 

Published: 24th April 2023 08:48 PM  |   Last Updated: 25th April 2023 01:58 PM   |  A+A-


Wrestlers_Bajrang_Punia_Vinesh_Phogat_Sakshi_Malik_during_a_protes1

ಡಬ್ಲ್ಯೂಎಫ್ ಐ ವಿರುದ್ಧದ ಹೋರಾಟದಲ್ಲಿ ಕುಸ್ತಿಪಟುಗಳಾದ ಬಜರಂಗ್ ಫುನಿಯಾ ಮೊದಲಾದವರು

Posted By : Nagaraja AB
Source : The New Indian Express

ನವದೆಹಲಿ: ಮೇ 7 ರಂದು ನಿಗದಿಯಾಗಿದ್ದ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಚುನಾವಣೆಗೆ ಕ್ರೀಡಾ ಸಚಿವಾಲಯ ಸೋಮವಾರ ತಡೆ ನೀಡಿದೆ. ಡಬ್ಲ್ಯೂಎಫ್ ಐ ನಿರ್ವಹಿಸಲು ಮತ್ತು ಅದಕ್ಕೆ ರಚನೆಯಾದ 45 ದಿನಗಳಲ್ಲಿ ಚುನಾವಣೆ ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಸೂಚಿಸಿದೆ. 

ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಪ್ರತಿಭಟನೆಯನ್ನು ಪುನರ್ ಆರಂಭಿಸಿದ್ದು, ಡಬ್ಲ್ಯೂಎಫ್ ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತನಿಖೆ ನಡೆಸಿದ ಮೇಲ್ವಿಚಾರಣಾ ಸಮಿತಿಯ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ ನಂತರ ಸಚಿವಾಲಯದಿಂದ ಈ ನಿರ್ಧಾರ ಹೊರಬಿದಿದ್ದೆ. 

ಮೇ 7 ರಂದು ಡಬ್ಲ್ಯೂಎಫ್ ಐಗೆ ಚುನಾವಣೆಯನ್ನು ನಿಗದಿಪಡಿಸಲಾಗಿದೆ ಎಂಬುದು ತಿಳಿದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಬೇಕು. ತಟಸ್ಥ ಸಂಸ್ಥೆ, ರಿಟರ್ನಿಂಗ್ ಆಫೀಸರ್ ಅಡಿಯಲ್ಲಿ ಹೊಸ ಚುನಾವಣೆ ನಡೆಸಬೇಕು ಎಂದು ಕ್ರೀಡಾ ಸಚಿವಾಲಯ ಭಾರತೀಯ ಒಲಂಪಿಕ್ ಅಸೋಸಿಷೇನ್ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. 

ಡಬ್ಲ್ಯೂಎಫ್ ಐ ಕಾರ್ಯಾಕಾರಿ ಸಮಿತಿ ರಚನೆಯಾದ 45 ದಿನಗಳೊಳಗೆ ಚುನಾವಣೆ ನಡೆಸಲು ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿಂದ ತಾತ್ಕಾಲಿತ ಸಮಿತಿ ಸ್ಥಾಪಿಸಬೇಕು ಮತ್ತು ಅಥ್ಲೆಟಿಕ್ ಆಯ್ಕೆ ಸೇರಿದಂತೆ ಮುಂದಿನ  ಸಮಿತಿ ರಚನೆಯಾಗುವವರೆಗೂ ಡಬ್ಲ್ಯೂಎಫ್ ಐ ವ್ಯವಹಾರಗಳನ್ನು  ಅದು ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: ಮಹಿಳಾ ರೆಸ್ಲರ್'ಗೆ ಲೈಂಗಿಕ ಕಿರುಕುಳ: ಬಿಜೆಪಿ ಸಂಸದನ ವಿರುದ್ಧ ಕ್ರಮಕ್ಕೆ ಆಗ್ರಹ, ತಮ್ಮೊಂದಿಗೆ ಕೈಜೋಡಿಸುವಂತೆ ರಾಜಕೀಯ ಪಕ್ಷಗಳಿಗೆ ಕುಸ್ತಿಪಟುಗಳ ಕರೆ

ಉನ್ನತ ಕುಸ್ತಿಪಟುಗಳಿಂದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಆರೋಪದ ನಂತರ, ಸಚಿವಾಲಯ ಡಬ್ಲ್ಯೂಎಫ್ ಐ ವ್ಯವಹಾರಗಳನ್ನು ನಡೆಸಲು ಮತ್ತು ವಿಷಯದ ಬಗ್ಗೆ ತನಿಖೆ ನಡೆಸಲು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಆರು ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿದೆ.

ಮೇಲುಸ್ತುವಾರಿ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಅದರ ಅಸ್ತಿತ್ವ ಕೊನೆಯಾಗಲಿದೆ. ಆದ್ದರಿಂದ, ಡಬ್ಲ್ಯೂಎಫ್ ಐ  ವ್ಯವಹಾರಗಳನ್ನು ನಿರ್ವಹಿಸಲು ಸೂಕ್ತವಾದ ಮಧ್ಯಂತರ ವ್ಯವಸ್ಥೆಗ ಮಾಡಲು ಸಚಿವಾಲಯವು ಐಒಎಗೆ ಹೇಳಿದೆ. 


Stay up to date on all the latest ಕ್ರೀಡೆ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp