ನಿಖರತೆಯ ತಳಹದಿಯ ಮೇಲೆ
ಅರಳಿದ ಬಟ್ಟಲ ಕಣ್ಣು ಕಂಡು
ಭಣಗುಡುವ ಖಾಲಿ ಕೊಡ
ಮುನಿಸಿಕೊಂಡಿದೆ ದಾರಿ ಕಾಣದೆ
----------------
ಬೆರಗಿನಿಂದ ಕಾಣುತ್ತಿರುವ ಬದುಕು
ಹೊಳೆಯುತ್ತಿದೆ ಬಾಗಿಲಿಗೆ ಸಿಕ್ಕಿಸಿದ
ತೋರಣಗಳಂತೆ
----
ಗಾರೆ ನೆಲದ ತೂತಿನಲ್ಲಿ
ಮೆತ್ತಿಕೊಂಡ ಮಣ್ಣನ್ನು
ದಿನಾ ಕೆದಕುತ್ತಾ ಕೂರುವ ಮಗು
ಗದರಿಸುವವರ ಎದುರು
ಸೆಟೆದು ನಿಂತಿದೆ ನಮಗೂ ಮಣ್ಣಿಗೂ
ಇರುವ ಋಣ ದೊಡ್ಡದೆಂದು!
- -ಕಾವೇರಿ ಎಸ್.ಎಸ್.
Advertisement