ಮೆಹ್ದಿ ಬಂಧನದ ನಂತರ ಇಸ್ಲಾಮಿಕ್ ರಾಜ್ಯವನ್ನು ನಿಷೇಧಿಸಿದ ಸರ್ಕಾರ

ಉಗ್ರಗಾಮಿ ಸಂಸ್ಥೆ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಅನ್ನು ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ...
ಐ ಎಸ್ ಸಂಸ್ಥೆಯ ಬರಹ
ಐ ಎಸ್ ಸಂಸ್ಥೆಯ ಬರಹ
Updated on

ನವದೆಹಲಿ: ಉಗ್ರಗಾಮಿ ಸಂಸ್ಥೆ ಇಸ್ಲಾಮಿಕ್ ಸ್ಟೇಟ್ (ಐ ಎಸ್) ಅನ್ನು ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ನಿಷೇದಿಸಲಾಗಿದೆ ಎಂದು ಮಂಗಳಾವರ ಲೋಕಸಭೆಯಲ್ಲಿ ಕೆಂದ್ರ ಗೃಹಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈ ಕಾಯ್ದೆಯ ೩೩ ನೆ ಅಂಶದಡಿ ಈ ಸಂಸ್ಥೆಯನ್ನು ಉಗ್ರಗಾಮಿ ಸಂಸ್ಥೆ ಎಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಐ ಎಸ್ ಪರ ಟ್ವೀಟ್ ಮಾಡುತ್ತಿದ್ದ ಮೆಹ್ದಿ ಮಸ್ರೂರ್ ಬಿಸ್ವಾಸ್ ಬೆಂಗಳೂರಿನಲ್ಲಿ ಬಂಧಿತನಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಐ ಎಸ್ ಅನ್ನು ನಿಷೇಧಿಸಿದೆ.

ಯುಎಪಿಎ ಕಾಯ್ದೆಯ ೩೩ ನೆ ಅಂಶವನ್ನು ವಿವರಿಸಿದ ರಾಜನಾಥ್, ವಿಶ್ವಸಂಸ್ಥೆ ನಿಷೇಧಿಸಿರುವ ಯಾವುದೇ ಉಗ್ರಗಾಮಿ ಸಂಸ್ಥೆ, ಸದಸ್ಯ ರಾಷ್ಟ್ರಗಳ ನಿಷೇಧಿತ ಸಂಸ್ಥೆಗಳ ಪಟ್ಟಿಯಲ್ಲೂ ಸೇರ್ಪಡೆಯಾಗುತ್ತದೆ. ಭಾರತದಲ್ಲಿ ಐ ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಸಂಖ್ಯೆ ನಗಣ್ಯ, ಈ ತೀವ್ರಗಾಮಿ ಸಂಸ್ಥೆಯು ಪ್ರಚಾರ ಪಡೆಯದಂತೆ ಮಾಡಲು ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಕೂಡ ರಾಜನಾಥ್ ತಿಳಿಸಿದ್ದಾರೆ.

ಕಾಂಗ್ರೆಸ್ ನ ಎಂ ರಾಮಚಂದ್ರನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜನಾಥ್, ಐ ಎಸ್ ನೇಮಕಾತಿಯನ್ನು ನಿರಾಕರಿಸುವ ಅಲ್ಪಸಂಖ್ಯಾತ ಸಮುದಾಯಕ್ಕೆ ಕೃತಜ್ಞತೆ ತಿಳಿಸಿದ್ದಾರೆ. "ಸಿರಿಯಾ ಮತ್ತು ಇರಾಕಿನಲ್ಲಿ ಐ ಎಸ್ ಚಟುವಟಿಕೆಗಳಿಗೆ ಸೇರದಂತೆ ತೀವ್ರಗಾಮಿ ಯುವಕರಿಗೆ ಸಮುದಾಯ ಬುದ್ಧಿ ಹೇಳುತ್ತಿದೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com