ಸೇನಾಶಾಲೆಯಲ್ಲಿ ನಡೆದ ಉಗ್ರರ ದಾಳಿಯ ಒಂದು ಚಿತ್ರ
ಸೇನಾಶಾಲೆಯಲ್ಲಿ ನಡೆದ ಉಗ್ರರ ದಾಳಿಯ ಒಂದು ಚಿತ್ರ

ಉಗ್ರರಿಗೆ ಮರಣ ದಂಡನೆ ನಿಷೇಧವನ್ನು ತೆರವುಗೊಳಿಸಿದ ಪಾಕಿಸ್ತಾನ

ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ ಮರಣ ದಂಡನೆ ಶಿಕ್ಷೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ.
Published on

ಇಸ್ಲಮಾಬಾದ್: ಉಗ್ರಗಾಮಿ ಪ್ರಕರಣಗಳಲ್ಲಿ ಸದ್ಯಕ್ಕೆ ನಿಷೇಧಗೊಂಡಿರುವ
ಮರಣ ದಂಡನೆಯನ್ನು ಬುಧವಾರ ಪಾಕಿಸ್ತಾನ ತೆರವುಗೊಳಿಸಿದೆ. ಪಾಕಿಸ್ತಾನದ ಪೇಶಾವರ್ ಜಿಲ್ಲೆಯ ಸೇನಾ ಶಾಲೆಯಲ್ಲಿ ೧೩೨ ಮಕ್ಕಳನ್ನು ತಾಲಿಬಾನ್ ಉಗ್ರರು ಬರ್ಬರ ಹತ್ಯೆಗೈದ ಒಂದು ದಿನದ ನಂತರ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ.

ಉಗ್ರಗಾಮಿ ಚಟುವಟಿಕೆ ಸಂಬಂಧಿತ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಯ ನಿಷೇಧವನ್ನು ತೆರವುಗೊಳಿಸಿರುವ ಹಿನ್ನಲೆಯಲ್ಲೇ, ಸಧ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಉಗ್ರರು ಗಲ್ಲು ಶಿಕ್ಷೆಗೆ ಒಳಪಡಬಹುದು ಎನ್ನಲಾಗಿದೆ.

ಪೇಶಾವರ್ ನ ಈ ದಾಳಿಯನ್ನು "ಅನಾಗರಿಕರ ನಡೆಸಿದ ರಾಷ್ಟ್ರೀಯ ದುರಂತ" ಎಂದು ಸರ್ವಪಕ್ಷ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ತಿಳಿಸಿದ್ದಾರೆ.

ಮಂಗಳವಾರ ನಡೆದ ಈ ಬರ್ಬರ ದಾಳಿಯಲ್ಲಿ ೧೩೨ ಮಕ್ಕಳನ್ನು ಒಳಗೊಂಡಂತೆ ೧೪೮ ಜನ ಮೃತಮಟ್ಟಿದ್ದರು. ಈ ಘಟನೆ ಇಡೀ ದೇಶವನ್ನು ದುಖಃದಲ್ಲಿ ಮುಳುಗಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com