ಬದ್‌ಗಾಂ ದಾಳಿ : ಜನರ ಸಾವಿನ ಹೊಣೆ ಹೊತ್ತ ಭಾರತೀಯ ಸೇನೆ

ಸೋಮವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು...
ಲೆ. ಜನರಲ್ ಡಿ.ಎಸ್ ಹೂಡಾ
ಲೆ. ಜನರಲ್ ಡಿ.ಎಸ್ ಹೂಡಾ
Updated on

ಶ್ರೀನಗರ: ಸೋಮವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಂ ಜಿಲ್ಲೆಯಲ್ಲಿ ನಡೆದ ಗುಂಡು ಹಾರಾಟದಲ್ಲಿ ಇಬ್ಬರು ಯುವಕರು ಸಾವಿಗೀಡಾಗಿದ್ದು, ಭಾರತೀಯ ಸೇನೆ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ.

ಶುಕ್ರವಾರ ಸುದ್ದಿಗೋಷ್ಠಿ ಕರೆದ ನಾರ್ಥನ್ ಕಮಾಂಡ್‌ನ ಜನರಲ್ ಆಫೀಸರ್ ಆಫ್ ಕಮಾಂಡಿಂಗ್ ಇನ್ ಚೀಫ್ ಲೆ. ಜನರಲ್ ಡಿ.ಎಸ್ ಹೂಡಾ , ತಮ್ಮ ಸೇನೆಯಿಂದ ತಪ್ಪಾಗಿದೆ. ಇನ್ಮುಂದೆ ಈ ರೀತಿ ಆಗಲ್ಲ ಎಂದು ಹೇಳಿದ್ದಾರೆ.

ತಪ್ಪಾದ ಮಾಹಿತಿ ಲಭಿಸಿರುವುದರಿಂದ ಈ ರೀತಿಯ ಘಟನೆ ನಡೆದಿದೆ. ಉಗ್ರರನ್ನು ಹೊತ್ತ ಬಿಳಿ ಕಾರೊಂದು ಅಲ್ಲಿ ನಿಂತಿದೆ ಎಂದು ನಮಗೆ ತಪ್ಪಾದ ಮಾಹಿತಿ ಲಭಿಸಿತ್ತು. ಆದ್ದರಿಂದಲೇ ನಾವು ಅತ್ತ ಗುಂಡಿನ ದಾಳಿ ಮಾಡಿದೆವು. ಈ ದಾಳಿಯಲ್ಲಿ ವ್ಯಕ್ತಿಗಳು ಸಾವಿಗೀಡಾಗಿದ್ದು ಇಗರ ಹೊಣೆಯನ್ನು ನಾವು ಹೊರುತ್ತೇವೆ ಎಂದು ಹೂಡಾ ಹೇಳಿದ್ದಾರೆ.

ಯಾವುದೇ ಕ್ರಮ ಕೈಗೊಳ್ಳುವ ಮುನ್ನ ನಾವು ಅತೀವ ಜಾಗ್ರತೆ ವಹಿಸುತ್ತೇನೆ. ಆದರೆ ಈ ತಪ್ಪು ಹೇಗೆ ನಡೆಯಿತು ಎಂದು ಅರ್ಥವಾಗುತ್ತಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೆ ನಾವು ತಕ್ಕ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ನಾವು 10 ದಿನಗಳಲ್ಲಿ ತನಿಖೆ ನಡೆಸಲಿದ್ದೇವೆ.

ಆದಾಗ್ಯೂ, ಇನ್ಮುಂದೆ ಅಂಥಾ ಘಟನೆಗಳು ಮರುಕಳಿಸದಿರಲಿ ಎಂದು ನಾವು ಆಶಿಸುತ್ತೇವೆ ಎಂದು ಹೂಡಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com