ಕಾಶ್ಮೀರ ಹತ್ಯೆಯಲ್ಲಿ ೯ ಸೈನಿಕರು ಆಪಾದಿತರು

ನವೆಂಬರ್ ೩ ರಂದು ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಯುವಕರನ್ನು ಕೊಂದದಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಶ್ರೀನಗರ: ನವೆಂಬರ್ ೩ ರಂದು ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಯುವಕರನ್ನು ಕೊಂದದಕ್ಕೆ ೯ ಜನ ಸೈನಿಕರನ್ನು ಆಪಾದಿತರೆಂದು ಪರಿಗಣಿಸಲಾಗಿದ್ದು ಕೋರ್ಟ್ ಮಾರ್ಷಲ್ ಎದುರಿಸಲಿದ್ದಾರೆ ಎಂದು ಸೇನೆ ಗುರುವಾರ ತಿಳಿಸಿದೆ.

"ಕಿರಿಯ ಆಯುಕ್ತರು ಒಳಗೊಂಡಂತೆ ೫೩ ರಾಷ್ಟ್ರೀಯ ರೈಫಲ್ಸ್ ದಳದ ೯ ಜನ ಸೈನಿಕರು ಚತ್ತೆಗ್ರಾಂ ಪ್ರದೇಶದಲ್ಲಿ ಗುಂಡು ಹಾರಿಸಿ ಇಬ್ಬರು ಯುವಕರ ಸಾವಿಗೆ ಕಾರಣವಾದದ್ದರಿಂದ ಆಪಾದಿತರೆಂದು ಪರಿಗಣಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಸೈನಿಕರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಆದುದರಿಂದ ಅವರನ್ನು ಆಪಾದಿತರೆಂದು ಪರಿಗಣಿಸಲಾಗಿದೆ. ಈ ತಂಡವನ್ನು ಮುನ್ನಡೆಸುತ್ತಿದ್ದ ಕಾಮಾಂಡರ್ ಸಂಪೂರ್ಣ ವಿಫಲರಾಗಿದ್ದಾರೆ" ಎಂದು ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಫೈಸಲ್ ಯೂಸುಫ್ ಭಟ್ ಮತ್ತು ಮೆಹ್ರಜುದ್ದೀನ್ ದಾರ ಅವರನ್ನು ನವೆಂಬರ್ ೩ ರಂದು ವಾಹನ ತಪಾಸಣಾ ವೇಳೆಯಲ್ಲಿ ಈ ಸೈನಿಕರು ಕೊಂದಿದ್ದರು. ಇದರಿಂದ ಕಾಶ್ಮೀರ ಜನತೆಯ ಆಕ್ರೋಶ ಮುಗಿಲುಮುಟ್ಟಿತ್ತು.

ಈ ಮೊದಲು ಸೇನೆ, ಪ್ರಯಾಣ ಮಾಡುತ್ತಿದ್ದ ಆ ಯುವಕರು ಭದ್ರತಾ ತಪಾಸಣೆಗೆ ನಿಲ್ಲಿಸಿರಲಿಲ್ಲ ಎಂದಿದ್ದರು. ಆನಂತರ ಗುಂಡು ಹಾರಿಸುವಾಗ ಪಾಲಿಸಬೇಕಿದ್ದ ನಿಯಮಗಳನ್ನು ಉಲ್ಲಂಘಿಸಿದ್ದನ್ನು ಸೇನೆ ಒಪ್ಪಿಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com