ಈ ವರ್ಷ ಮುಂಗಾರು ಆಗಮನ ಬೇಗನೇ ಆಗಿತ್ತು. ಅಷ್ಟೊತ್ತಿಗೆ ಚೆನ್ನೈ ಕಾರ್ಪರೇಷನ್ 1,860 ಕಿಮಿ ಉದ್ದದ ಚರಂಡಿಯಿಂದ 6,200 ಮೆಟ್ರಿಕ್ ಟನ್ ಹೂಳು ಎತ್ತಿತ್ತು. ಆದರೆ ಇದ್ಯಾವುದೇ ಕ್ರಿಯೆಗಳು ನೀರು ಹರಿದು ಹೋಗಲು ಸಹಾಯ ಮಾಡಲಿಲ್ಲ. ಅಂದರೆ ಚೆನ್ನೈ ನಗರ ಅಭಿವೃದ್ಧಿ ಮಾಡುವಾಗ ಸರಿಯಾದ ಮುಂದಾಲೋಚನೆ ಇಲ್ಲದೆ ಕಟ್ಟಡಗಳನ್ನು ಕಟ್ಟಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತದೆ.