ದೇಶದ ರಾಜಧಾನಿಯಲ್ಲಿ ಗಣ್ಯರಿಗೆ ಗುರಿಯಿಟ್ಟು ಉಗ್ರ ಕೃತ್ಯಗಳನ್ನು ನಡೆಸಲು 4 ಉಗ್ರರು ಭಾರತಕ್ಕೆ ನುಸುಳಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ಪಡೆ ಈ ಹಿಂದೆಯೇ ಮುನ್ನೆಚ್ಚರಿಕೆ ನೀಡಿತ್ತು. ಕಳೆದ ತಿಂಗಳು ಈ ಉಗ್ರರು ಭಾರತದೊಳಗೆ ನುಸುಳಿದ್ದರು. ಲಷ್ಕರೆ ಕಮಾಂಡರ್ ಅಬು ದುಜನ್ ಜತೆ ಇವರು ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ದುಜನ್, ಉಕಾಕ್ಷ ಎಂಬ ಹೆಸರಿರುವ ಇವರನ್ನು ಪತ್ತೆ ಹಚ್ಚುವ ಕ್ರಿಯೆ ಬಿರುಸಿನಿಂದ ಸಾಗಿದೆ.