ಘಟನೆ ಹಿನ್ನಲೆ: ಕಣಿವೆಕೊಪ್ಪಲು, ಕನಗನಮರಡಿ, ಚಿಕ್ಕಬ್ಯಾಡರಹಳ್ಳಿ ವೃತ್ತದ ಸಮೀಪ ಸೇರಿದಂತೆ ಅನೇಕ ಕಡೆ ಬಳಗಿನ ಜಾವ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ಪೊಲೀಸರು ಸಹಕಾರ ನೀಡುತ್ತಿರುವ ಕುರಿತು ದೂರುಗಳು ಬಂದಿದ್ದವು. ಈ ಸಂಬಂಧ ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜು ಸೋಮವಾರ ಬೆಳಗ್ಗೆ ಚಿಕ್ಕಬ್ಯಾಡರಹಳ್ಳಿ ಪಕ್ಕದ ಮರಳು ಅಡ್ಡೆ ಮೇಲೆ ದಾಳಿ ಆಗ ಸ್ಥಳದಲ್ಲಿದ್ದ ದೇವರಾಜುನನ್ನು ಬಂಧಿಸಿದ್ದಲ್ಲದೆ, ಮರಳು ತುಂಬಿದ ಒಂದು ಟಿಪ್ಪರ್, ಸ್ಕಾರ್ಪಿಯೋ ಹಾಗೂ ಒಂದು ಬೈಕ್ ವಶಕ್ಕೆ ತೆಗೆದುಕೊಂಡಿದ್ದರು. ಈ ಬಳಿಕ ಈ ವಾಹನಗಳನ್ನು ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ ಅವರಿಗೆ ಒಪ್ಪಿಸಿ ಉಪವಿಭಾಗಾಧಿಕಾರಿ ಪಟ್ಟಣಕ್ಕೆ ವಾಪಸಾಗಿದ್ದರು. ಅಯ್ಯನಗೌಡ ಚಿಕ್ಕಬ್ಯಾಡರಹಳ್ಳಿಗೆ ತೆರಳುತ್ತಿದ್ದ ವೇಳೆ ಡಾ.ರಾಜ್ಕುಮಾರ್ ವೃತ್ತದಲ್ಲಿ 5 ಎತ್ತಿನಗಾಡಿಯಲ್ಲಿ ಮರಳು ಸಾಗಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಆಗ ಮರಳು ದಂಧೆಕೋರರು ಸಬ್ಇನ್ಸ್ ಪೆಕ್ಟರ್ ರನ್ನು ಹಿಡಿದು ತಳ್ಳಾಡಿದ್ದಾರೆ. ವಿಷಯ ತಿಳಿದ ಉಪವಿಭಾಗಾಧಿಕಾರಿ ಸ್ಥಳಕ್ಕೆ ಧಾವಿಸಿ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.