ಪೋಸ್ಟ್ ಮಾರ್ಟಮ್ : 'ಹೊರಗಿನ' ಬೇಡಿ ಬಿಟ್ಟುಕೊಟ್ಟಿದ್ದು ಬಿಜೆಪಿಯ ಅತಿ ಸುರಕ್ಷಿತ ಸ್ಥಾನ

ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ
ಕಿರಣ್ ಬೇಡಿ
ಕಿರಣ್ ಬೇಡಿ
Updated on

ನವದೆಹಲಿ: ಕೃಷ್ಣನಗರ ಬಿಜೆಪಿ ಪಕ್ಷದ ಅತಿ ಸುರಕ್ಷಿತ ಸ್ಥಾನ ಎಂದೇ ಹೇಳಲಾಗುತ್ತದೆ. ಮಾರಾಟಗಾರರ ಮತ್ತು ಮಧ್ಯಮವರ್ಗದ ವೃತ್ತಿಪರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಎಎಪಿ ಸುನಾಮಿಗೆ ಬಿಜೆಪಿ ಕೊಚ್ಚಿ ಹೋಗಿದೆ.

ಮತ ಎಣಿಕೆ ಸಮಯದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಅದೃಷ್ಟ 'ತೆರೆಯಾಟ'ವಾಡುತ್ತಿತ್ತು. ಒಂದು ಸಮಯದಲ್ಲಿ ಅವರು ಮೂಂಚೂಣಿಯಲ್ಲಿದ್ದರು ಕೂಡ, ಕೊನೆಗೆ ೨೨೭೭ ಮತಗಳ ಅಂತರದಿಂದ ಸೋಲು ಕಂಡರು. ೨೦೧೩ ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಹರ್ಷವರ್ಧನ್ ಈ ಕ್ಷೇತ್ರದಲ್ಲಿ ೪೬೦೦೦ ಮತಗಳ ಅಂತರದಿಂದ ಗೆದ್ದಿದ್ದರು.

ಮೂರು ದಿನಗಳ ಹಿಂದೆ ಚಟುವಟಿಕೆಗಳ ಗೂಡಾಗಿದ್ದ ಚಂದ್ರನಗರದ ಬಿಜೆಪಿ ಕಛೇರಿಗೆ ನೆನ್ನೆ ಬೀಗ ಜಡಿಯಲಾಗಿತ್ತು. "ಡಾಕ್ಟರ್ ಸಾಹೇಬರು (ಕೇಂದ್ರ ಸಚಿವ ಹರ್ಷವರ್ಧನ್) ಸ್ಪರ್ಧಿಸಿದ್ದರೆ ಖಂಡಿತಾ ಗೆಲ್ಲುತ್ತಿದ್ದರು. ಅಭ್ಯರ್ಥಿಗಳನ್ನು ಬಿಡಿ, ಕಾರ್ಯಕರ್ತರನ್ನು ಕೂಡ ಹೊರಗಿನಿಂದ ಕರೆತರಲಾಗಿತ್ತು. ಈ ಕ್ಷೇತ್ರದ ಬಗ್ಗೆ ಅವರಿಗೆ ಕಿಂಚಿತ್ತೂ ತಿಳಿದಿರಲಿಲ್ಲ" ಎನ್ನುತ್ತಾರೆ ೪೧ ವರ್ಷದ ಮೊಬೈಲ್ ಫೋನುಗಳ ಅಂಗಡಿ ಮಾಲೀಕ ಗಣೇಶ್ ಗುಪ್ತ. ಕಳೆದ ೨೦ ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದ ಗಣೇಶ್ ಈ ಬಾರಿ ತಮ್ಮ ನಿಷ್ಠೆಯನ್ನು ಬದಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com