ತಿರುವನಂತಪುರಮ್ ಪದ್ಮನಾಭಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆ

ಶ್ರೀ ಪದ್ಮನಾಭಾಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್
ಶ್ರೀ ಪದ್ಮನಾಭಾಸ್ವಾಮಿ ದೇವಾಲಯ
ಶ್ರೀ ಪದ್ಮನಾಭಾಸ್ವಾಮಿ ದೇವಾಲಯ
Updated on

ತಿರುವನಂತಪುರಮ್: ಶ್ರೀ ಪದ್ಮನಾಭಾಸ್ವಾಮಿ ದೇವಾಲಯದಿಂದ ೨೬೬ಕೆಜಿ ಚಿನ್ನ ನಾಪತ್ತೆಯಾಗಿದೆ ಎಂದು ಕೇಂದ್ರದ ಮಾಜಿ ಆಡಿಟರ್ ಜನರಲ್ ವಿನೋದ್ ರಾಯ್ ಸುಪ್ರೀಮ್ ಕೋರ್ಟ್ ಗೆ ತಿಳಿಸಿದ್ದಾರೆ.

ದೇವಾಲಯದ ಆಸ್ತಿ-ಪಾಸ್ತಿಯನ್ನು ಆಡಿಟ್ ಮಾಡಲು ಸುಪ್ರೀಮ್ ಕೋರ್ಟ್ ರಾಯ್ ಅವರನ್ನು ನೇಮಿಸಿತ್ತು. ಈಗ ರಾಯ್ ಅವರು ಸಲ್ಲಿಸಿರುವ ೧೮೦೦ ಪುಟದ ವರದಿಯಲ್ಲಿ ಈ ವಿಷಯ ಬಹಿರಂಗಪಡಿಸಿದ್ದಾರೆ.

ದೇವಸ್ಥಾನಕ್ಕೆ ಚಿನ್ನದ ಲೇಪನದ ಕೆಲಸದ ಸಲುವಾಗಿ ದೇವಾಲಯದ ದಾಸ್ತಾನಿನಿಂದ ೮೯೩.೪೪ ಕೆಜಿ ಚಿನ್ನವನ್ನು "ಕರಗಿಸಲು ಮತ್ತು ಶುದ್ಧೀಕರಿಸಲು" ಖಾಸಗಿ ಗುತ್ತಿಗೆದಾರನಿಗೆ ನೀಡಲಾಗಿತ್ತು.  ಆದರೆ ಹಿಂದಿರುಗಿದ್ದು ಕೆಲವ ೬೩೭ ಕೆಜಿ ಎನ್ನುತ್ತಾರೆ ದೇವಾಲಯದ ಅಧಿಕಾರಿಗಳು.

ಈ ಇಡೀ ಪ್ರಕರಣದಲ್ಲಿ ಏನೋ ತಪ್ಪು ನಡೆದಿದ್ದು, ಖಾಸಗಿ ಗುತ್ತಿಗೆದಾರನಿಗೆ ಚಿನ್ನ ನೀಡುವಾಗ ಅದರ ಗುಣಮಟ್ಟ ಪರೀಕ್ಷಿಸದೆ ಕೊಟ್ಟದ್ದೇಕೆ ಎಂದು ಪ್ರಶ್ನಿಸುತ್ತದೆ ವರದಿ.

ಆಸ್ತಿಪತ್ರದ ಪೂರಕವಾದ ದಾಖಲೆಗಳನ್ನು ಒದಗಿಸದಿದ್ದಕ್ಕೆ, ದೇವಾಲಯದ ಆಡಳಿತ ಮಂಡಳಿಯಾದ ಟ್ರ್ಯಾವಂಕೋರ್ ರಾಜವಂಶವನ್ನು ಈ ವರದಿ ದೂರಿದೆ.

ಹಣಕಾಸಿನ ದಾಖಲೆಗಳು ತಿರುಚಲಾಗಿದೆ ಹಾಗೂ ೨೦೦೮-೨೦೦೯ ರಲ್ಲಿ ದೇವಾಲಯ ಪಡೆದ ಚಿನ್ನ ಮತ್ತು ಬೆಳ್ಳಿಯ ದಾನದ ವಿವರವನ್ನು ದಾಖಲಿಸಿಲ್ಲ ಎಂದು ದೂರಿದೆ ವರದಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com