ಮಂಗಳ ಗ್ರಹಕ್ಕೆ ಯಾತ್ರೆ: ಮೂವರು ಭಾರತೀಯರಿಗೆ ಅವಕಾಶ

2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ...
ಶ್ರದ್ಧಾ ಪ್ರಸಾದ್
ಶ್ರದ್ಧಾ ಪ್ರಸಾದ್
Updated on

ಲಂಡನ್ : 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ ಪಾಲಕ್ಕಾಡ್  ನಿವಾಸಿಯಾದ ಶ್ರದ್ಧಾ ಪ್ರಸಾದ್ ಎಂಬ ಹತ್ತೊಂಬತ್ತರ ಹರೆಯದ ಸೇರಿದಂತೆ ಮೂವರು ಭಾರತೀಯರಿಗೆ ಈ ಭಾಗ್ಯ ಒಲಿದು ಬಂದಿದೆ.

ಹಾಲೆಂಡ್ ಸಂಸ್ಥೆಯೊಂದು ಮಾರ್ಸ್ ಒನ್ ಎಂಬ ಯೋಜನೆಯ ಅಂಗವಾಗಿ 4 ಜನರನ್ನು ಮಂಗಳ ಗ್ರಹಕ್ಕೆ ಕಳಿಸಲಾಗುತ್ತಿದೆ. ಈ ಯೋಜನೆಯ ಮೂರನೇ ಹಂತದಲ್ಲಿ 100 ಜನರ ಪಟ್ಟಿಯಲ್ಲಿ ಶ್ರದ್ಧಾ ಹೆಸರು ಆಯ್ಕೆ ಆಗಿದೆ.

ಪಾಲಕ್ಕಾಡ್ ನಿವಾಸಿಯಾದ ಶ್ರದ್ಧಾ ಕೊಯಂಬತ್ತೂರ್ ಅಮೃತಾ ವಿಶ್ವವಿದ್ಯಾಪೀಠದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಶ್ರದ್ಧಾ ಜತೆಗೆ ತರಣ್ ಜಿತ್ ಸಿಂಗ್ ಭಾಟಿಯಾ (29),  ರಿತಿಕಾ ಸಿಂಗ್ (29) ಎಂಬಿಬ್ಬರೂ ಈ ಪಟ್ಟಿಯಲ್ಲಿದ್ದಾರೆ.

ತರಣ್‌ಜಿತ್ ಯುನಿವರ್ಸಿಎಟಿ ಆಫ್ ಸೆಂಟ್ರಲ್ ಫ್ಲೋರಿಡಾದಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಅದೇ ವೇಳೆ ರಿತಿಕಾ ದುಬೈ ನಿವಾಸಿಯಾಗಿದ್ದಾರೆ. 660 ಜನರ ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಆದಾಗ್ಯೂ,  ಮೂರನೇ ಪಟ್ಟಿಯಲ್ಲಿ ಮೂರು ಭಾರತೀಯರ ಹೆಸರು ಮಾತ್ರ ಇದೆ.

ಈ ಯಾತ್ರೆಗಾಗಿ 202, 586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 100 ಜನರ ಪಟ್ಟಿ ತಯಾರಿಸಲಾಗಿತ್ತು. 50 ಗಂಡಸರು ಮತ್ತು 50 ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಯುಎಸ್39,  ಯುರರೋಪ್ 31, ಏಷ್ಯಾ 16, ಆಫ್ರಿಕಾ -07 ಹಾಗೂ ಒಷೇನಿಯಾದಿಂದ 7 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಹಂತದಲ್ಲಿ ನಾಲ್ಕು ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಸಂಸ್ಥೆ ತೀರ್ಮಾನಿಸಿದೆ. ಆಮೇಲೆ ಅಲ್ಲಿ ಮನುಷ್ಯರ ಕಾಲನಿ ನಿರ್ಮಿಸುವ ಸಲುವಗಿ 40 ಜನರನ್ನು ಕಳುಹಿಸಲಾಗುವುದು.  2024ರಲ್ಲಿ ನಡೆಯಲಿರುವ ಈ ಯಾತ್ರೆಯ ಕೊನೆಯ ಸುತ್ತಿನಲ್ಲಿ ಆಯ್ಕೆಯಾದವರಿಗೆ 7 ವರ್ಷಗಳ ಕಾಲ ತರಬೇತಿ ನೀಡಲಾಗುವುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com