ಮಂಗಳ ಗ್ರಹಕ್ಕೆ ಯಾತ್ರೆ: ಮೂವರು ಭಾರತೀಯರಿಗೆ ಅವಕಾಶ

2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ...
ಶ್ರದ್ಧಾ ಪ್ರಸಾದ್
ಶ್ರದ್ಧಾ ಪ್ರಸಾದ್
Updated on

ಲಂಡನ್ : 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ ಪಾಲಕ್ಕಾಡ್  ನಿವಾಸಿಯಾದ ಶ್ರದ್ಧಾ ಪ್ರಸಾದ್ ಎಂಬ ಹತ್ತೊಂಬತ್ತರ ಹರೆಯದ ಸೇರಿದಂತೆ ಮೂವರು ಭಾರತೀಯರಿಗೆ ಈ ಭಾಗ್ಯ ಒಲಿದು ಬಂದಿದೆ.

ಹಾಲೆಂಡ್ ಸಂಸ್ಥೆಯೊಂದು ಮಾರ್ಸ್ ಒನ್ ಎಂಬ ಯೋಜನೆಯ ಅಂಗವಾಗಿ 4 ಜನರನ್ನು ಮಂಗಳ ಗ್ರಹಕ್ಕೆ ಕಳಿಸಲಾಗುತ್ತಿದೆ. ಈ ಯೋಜನೆಯ ಮೂರನೇ ಹಂತದಲ್ಲಿ 100 ಜನರ ಪಟ್ಟಿಯಲ್ಲಿ ಶ್ರದ್ಧಾ ಹೆಸರು ಆಯ್ಕೆ ಆಗಿದೆ.

ಪಾಲಕ್ಕಾಡ್ ನಿವಾಸಿಯಾದ ಶ್ರದ್ಧಾ ಕೊಯಂಬತ್ತೂರ್ ಅಮೃತಾ ವಿಶ್ವವಿದ್ಯಾಪೀಠದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಶ್ರದ್ಧಾ ಜತೆಗೆ ತರಣ್ ಜಿತ್ ಸಿಂಗ್ ಭಾಟಿಯಾ (29),  ರಿತಿಕಾ ಸಿಂಗ್ (29) ಎಂಬಿಬ್ಬರೂ ಈ ಪಟ್ಟಿಯಲ್ಲಿದ್ದಾರೆ.

ತರಣ್‌ಜಿತ್ ಯುನಿವರ್ಸಿಎಟಿ ಆಫ್ ಸೆಂಟ್ರಲ್ ಫ್ಲೋರಿಡಾದಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಅದೇ ವೇಳೆ ರಿತಿಕಾ ದುಬೈ ನಿವಾಸಿಯಾಗಿದ್ದಾರೆ. 660 ಜನರ ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಆದಾಗ್ಯೂ,  ಮೂರನೇ ಪಟ್ಟಿಯಲ್ಲಿ ಮೂರು ಭಾರತೀಯರ ಹೆಸರು ಮಾತ್ರ ಇದೆ.

ಈ ಯಾತ್ರೆಗಾಗಿ 202, 586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 100 ಜನರ ಪಟ್ಟಿ ತಯಾರಿಸಲಾಗಿತ್ತು. 50 ಗಂಡಸರು ಮತ್ತು 50 ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಯುಎಸ್39,  ಯುರರೋಪ್ 31, ಏಷ್ಯಾ 16, ಆಫ್ರಿಕಾ -07 ಹಾಗೂ ಒಷೇನಿಯಾದಿಂದ 7 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಹಂತದಲ್ಲಿ ನಾಲ್ಕು ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಸಂಸ್ಥೆ ತೀರ್ಮಾನಿಸಿದೆ. ಆಮೇಲೆ ಅಲ್ಲಿ ಮನುಷ್ಯರ ಕಾಲನಿ ನಿರ್ಮಿಸುವ ಸಲುವಗಿ 40 ಜನರನ್ನು ಕಳುಹಿಸಲಾಗುವುದು.  2024ರಲ್ಲಿ ನಡೆಯಲಿರುವ ಈ ಯಾತ್ರೆಯ ಕೊನೆಯ ಸುತ್ತಿನಲ್ಲಿ ಆಯ್ಕೆಯಾದವರಿಗೆ 7 ವರ್ಷಗಳ ಕಾಲ ತರಬೇತಿ ನೀಡಲಾಗುವುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com