ಆಪ್ ಅಭ್ಯರ್ಥಿ ನಿವಾಸದ ಮೇಲೆ ಚು.ಆಯೋಗ ದಾಳಿ

ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನರೇಶ್ ಬಲ್ಯಾಣ್ ಅವರ ನಿವಾಸದ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು...
ನರೇಶ್ ಬಲ್ಯಾಣ್
ನರೇಶ್ ಬಲ್ಯಾಣ್
Updated on

ನವದೆಹಲಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನರೇಶ್ ಬಲ್ಯಾಣ್ ಅವರ ನಿವಾಸದ ಮೇಲೆ ಚುನಾವಣಾ  ಆಯೋಗದ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

ಈ ದಾಳಿಯಲ್ಲಿ ಅಧಿಕಾರಿಗಳು  5000 ಬಾಟಲ್ ಮದ್ಯ ವಶಪಡಿಸಿದ್ದು, ಬಲ್ಯಾಣ್ ನಡವಳಿಕೆಯ ನಿಯಮಾವಳಿ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಆಪ್ ಸದಸ್ಯರಾದ ಬಲ್ಯಾಣ್ ಅವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ್ ನಗರದಿಂದ ಸ್ಪರ್ಧಿಸಲಿದ್ದಾರೆ.

ಆದರೆ ತನ್ನ ಮನೆಯಿಂದ ವಶ ಪಡಿಸಿಕೊಂಡ ಮದ್ಯ ನನಗೆ ಸೇರಿದ್ದಲ್ಲ, ಅದು ಬಿಜೆಪಿ ಕಾರ್ಯಕರ್ತನೊಬ್ಬನಿಗೆ ಸೇರಿದ್ದು ಎಂದು ಬಲ್ಯಾಣ್ ವಾದಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com