ಅಮರನಾಥ ಯಾತ್ರೆ: ಭದ್ರತೆಯನ್ನು ಪರಿಶೀಲಿಸಲಿರುವ ರಾಜನಾಥ್ ಸಿಂಗ್

ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಅಮರನಾಥ ಯಾತ್ರೆಯ ಹಿಮ ಲಿಂಗ
ಅಮರನಾಥ ಯಾತ್ರೆಯ ಹಿಮ ಲಿಂಗ
Updated on

ಶ್ರೀನಗರ: ಅಮರನಾಥ ಯಾತ್ರೆಗೆ ಮಾಡಲಾಗಿರುವ ಭದ್ರತಾ ಸೌಕರ್ಯವನ್ನು ಪರಿಶೀಲಿಸಲು ಹಾಗೂ ಹಿಮಾಯದ ಶಿವ ಗುಹಾ ದೇವಾಲಯಲ್ಲಿ ಪ್ರಾರ್ಥನೆ ಸಲ್ಲಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬುಧವಾರ ಶ್ರೀನಗರಕ್ಕೆ ೨ ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಮರನಾಥ ಯಾತ್ರೆ ಜುಲೈ ೨ ರಿಂದ ಪ್ರಾರಂಭವಾಗಲಿದೆ.

ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯ್ಯದ್ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಗೃಹಸಚಿವರು ಈ ವರ್ಷದ ಅಮರನಾಥ ಯಾತ್ರೆಯ ಭದ್ರತಾ ಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

"ಅವರು ಜುಲೈ ೨ ರಂದು ಪವಿತ್ರ ಅಮರನಾಥ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಲಿರುವ ಮೊದಲ ಸರಣಿಯ ಭಕ್ತರಲ್ಲಿ ಒಬ್ಬರಾಗಿರುತ್ತಾರೆ" ಎಂದು ಕೂಡ ಹಿರಿಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಈ ಪವಿತ್ರ ಕ್ಷೇತ್ರದ ಹಿಮಾಲಯ ಗುಹಾ ದೇವಾಲಯದ ತೀರ್ಥಯಾತ್ರೆ ಜುಲೈ ೨ ರಿಂದ ಆಗಸ್ಟ್ ೨೯ರವರೆಗೆ ೫೯ದಿನಗಳ ಕಾಲ ನಡೆಯಲಿದೆ.

ಸಮುದ್ರಮಟ್ಟದಿಮ್ದ ೧೪೫೦೦ ಅಡಿ ಎತ್ತರದಲ್ಲಿರುವ ಈ ಗುಹಾ ದೇವಾಲಯದಲ್ಲಿ ಮಾನ್ಸೂನ್ ವೇಳೆಯಲ್ಲಿ ಹಿಮ ಸ್ವಾಭಾವಿಕವಾಗಿ ಲಿಂಗದ ರೂಪ ತಾಳುತ್ತದೆ. ೩೪ ಕಿಮೀ ಸಾಂಪ್ರದಾಯಿಕ ಫಹಲ್ಗಂ ಮಾರ್ಗ ಮೂಲಕ ಈ ಪವಿತ್ರ ತಾಣಕ್ಕೆ ತೆರಳಲು ನಾಲ್ಕು ದಿನದ ಚಾರಣ ಅಗತ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com