ತಮಿಳರಿಗೆ ಜಾಗ ಹಿಂದಿರುಗಿಸಲು ಮುಂದಾದ ಲಂಕಾ

ಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕೊಲೊಂಬೋ: ಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ ಚಾಲನೆ ನಿಡಿದೆ. ಏಪ್ರಿಲ್ ಕೊನೆಯ ವಾರದ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಲಿದ್ದು ಇದು ತಮಿಳು ಹೊಸ ವರ್ಷದ ಕೊಡುಗೆಯಾಗಲಿದೆ. ಈ ೧೦೫೨ ಎಕರೆಗಳಲ್ಲಿ ಶ್ರೀಲಂಕಾ ನೌಕಾದಳ ಹೊಂದಿರುವ ೨೩೪ ಎಕರೆ ಕೂಡ ಸೇರಿಕೊಂಡಿದೆ.

ಆಗಸ್ಟ್ ೨೦೦೬ ರಲ್ಲಿ ತಮಿಳು ಸ್ವಾತಂತ್ರ್ಯ ಹೋರಾಟಗಾರರ ಜೊತೆ ನಡೆದ ಯುದ್ಧದ ವೇಳೆಯಲ್ಲಿ ಈ ಜಾಗವನ್ನು ಶ್ರೀಲಂಕಾ ಸೇನೆ ವಶಪಡಿಸಿಕೊಂಡಿತ್ತು.

ಎಲ್ ಟಿ ಟಿ ಇ ವಿರುದ್ಧದ ಈ ಯುದ್ಧದಲ್ಲಿ ಶ್ರೀಲಂಕಾ ಸೇನೆ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆಯಲ್ಲಿ ೮೨೫ ಕುಟುಂಬಗಳು ಸಂಪುರದಿಂದ ಓಡಿ ಹೋಗಿದ್ದವು. ೨೦೦೭ ರಲ್ಲಿ ಈ ಯುದ್ಧ ಮುಗಿದ ನಂತರವೂ ತಮ್ಮ ಜಮೀನನ್ನು ವಾಪಸ್ ಪಡೆಯಲು ಈ ಕುಟುಂಬಗಳು ವಿಫಲವಾಗಿದ್ದವು. ಇದು ಏಕೆಂದರೆ ಸಂಪುರ್ ಅನ್ನು ಅತಿ ಹೆಚ್ಚಿನ ಭದ್ರತಾ ಪ್ರದೇಶ ಎಂದು ಘೋಷಿಸಲಾಗಿತ್ತು. ಇದು ತ್ರಿಂಕೊಮಾಲೇ ನೌಕಾ ಯಾನದ ಎದುರಿಗೇ ಇದ್ದ ಪ್ರದೇಶವಾಗಿತ್ತು.

ಸಂಪುರದಿಂದ ಓಡಿಹೋಗಿದ್ದ ಕುಟುಂಬ ಸದಸ್ಯರನ್ನು ನಿರಾಶ್ರಿತರ ಶಿಬಿರದಲ್ಲಿ  ಇರಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com