ಶ್ರೀನಗರ: ಉಚ್ಛ ನ್ಯಾಯಾಲಯ ಜಮ್ಮು ಕಾಶ್ಮೀರದಲ್ಲಿ ದನದ ಮಾಂಸ ನಿಷೇಧಿಸುವಂತೆ ಆದೇಶ ನೀಡಿರುವ ಹಿನ್ನಲೆಯಲ್ಲಿ ಕಣಿವೆಯಲ್ಲಿ ಸಂಪೂರ್ಣ ಬಂದ್ ನಡೆಸಲಾಗಿದೆ.
ಹುರಿಯತ್ ಕಾನ್ಫರೆನ್ಸ್ ನ ಗಿಲಾನಿ ಬಳಗ ನೀಡಿರುವ ಬಂದ್ ಕರೆಗೆ ಇತರ ಪ್ರತ್ಯೇಕವಾದಿ ನಾಯಕರು ಕೂಡ ಬೆಂಬಲ ನೀಡಿದ್ದಾರೆ.
ಎಲ್ಲ ಅಂಗಡಿ ಮುಂಗಟ್ಟುಗಳು, ಉದ್ದಿಮೆಗಳು, ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗಿದ್ದು, ರಸ್ತೆಗಳಿಗೆ ಸಾರ್ವಜನಿಕ ವಾಹನಗಳು ಇಳಿದಿಲ್ಲ.
ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಪೊಲೀಸರನ್ನು ಮತ್ತು ಅರೆಮಿಲಿಟರಿ ಪಡೆಗಳನ್ನು ಪ್ರಮುಖ ಪ್ರದೇಶಗಳಲ್ಲಿ ನಿಯೋಜಿಸಿದ್ದಾರೆ.
ಬೀಫ್ ನಿಷೇಧದ ವಿರುದ್ಧದ ಪ್ರತಿಭಟನೆಗಳನ್ನು ತಡೆಯಳು ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಏರಲಾಗಿದೆ.
Advertisement